ಪ್ರಜಾಸ್ತ್ರ ಸುದ್ದಿ
ಸಿಂದಗಿ: ಸಿಂದಗಿ ವಲಯದ ತುರಕನಗೇರಿ ಗ್ರಾಮದಿಂದ ಕಲಕೇರಿಗೆ ಹೋಗುವ ರಸ್ತೆ ಮಧ್ಯೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, 3.780 ಲೀಟರ್ ಗೋವಾ ಮದ್ಯವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ತುರಕನಗೇರಿಯ ಶಮೀದ ಕಾಶೀಮ ಪಟೇಲ ಬಿರಾದಾರ ಹಾಗೂ ಮೆಹಬೂಬಪಟೇಲ ಸಾಹೇಬಪಟೇಲ ಬಿರಾದಾರ ಅನ್ನೋ ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ.
ಈ ದಾಳಿ ವೇಳೆ ಸಿಂದಗಿ ವಲಯದ ಅಬಕಾರಿ ನಿರೀಕ್ಷಕರಾದ ಆರತಿ ಖೈನೂರ, ಸಿಬ್ಬಂದಿ ಎಂ.ಜೆ ಮೊಕಾಶಿ, ಆರ್.ಬಿ ಮುಳಸಾವಳಗಿ, ರೇವಣಸಿದ್ದಪ್ಪ ಅತಾಪಿ, ಜೈರಾಮ ರಾಠೋಡ, ಎನ್.ಎಸ್ ಸಾತಲಗಾಂವ ಹಾಗೂ ಯಮನಪ್ಪ ಹರಿಜನ ಭಾಗಹಿಸಿದ್ರು.