ಪ್ರಜಾಸ್ತ್ರ ಸುದ್ದಿ
ದೇವರಹಿಪ್ಪರಗಿ: ಸಿಂದಗಿ ವಲಯ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದೇವರಹಿಪ್ಪರಗಿ ತಾಲೂಕಿನ ಕಲಕೇರಿ ಗ್ರಾಮಕ್ಕೆ ಹೋಗುವ ಮಾರ್ಗದ ಕೊರಟಗಿ ತಾಂಡಾದ ಬಸ್ ನಿಲ್ದಾಣದ ಹತ್ತಿರ, 8.640 ಲೀಟರ್ ಗೋವಾ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಮಾರುತಿ ಸುಜುಕಿ ಏಟ್ರಿಗಾ ಕಾರಿನಲ್ಲಿ ಮದ್ಯ ಸಾಗಿಸಲಾಗುತಿತ್ತು. ಅಬಕಾರಿ ಅಧಿಕಾರಿಗಳನ್ನು ನೋಡಿ ಕಾರು ಬಿಟ್ಟು ಸವಾರ ಪರಾರಿಯಾಗಿದ್ದು, ಕಾರಿನ ಮಾಲೀಕ ಹಾಗೂ ಸವಾರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ನಿರೀಕ್ಷರಾದ ಆರತಿ ಖೈನೂರ ತಿಳಿಸಿದ್ದಾರೆ.
ಈ ವೇಳೆ ಅಬಕಾರಿ ಉಪ ನಿರೀಕ್ಷಕ ಡಿ.ವಿ ರಜಪೂತ, ಸಿಂದಗಿ ವಲಯ ಅಬಕಾರಿ ಸಿಬ್ಬಂದಿ ಎಂ.ಜೆ ಜೋಶಿ, ಆರ್.ಬಿ ಮುಳಸಾವಳಗಿ, ರೇವಣಸಿದ್ದಪ್ಪ ವಾತಾಪಿ, ಜೈರಾಮ ರಾಠೋಡ, ಎನ್.ಎಸ್ ಸಾತಲಗಾಂವ, ಎನ್.ಪಿ ಸೂರ್ಯವಂಶಿ ಭಾಗವಹಿಸಿದ್ದರು.