ಪ್ರಜಾಸ್ತ್ರ ಸುದ್ದಿ
ಅಹಮದಾಬಾದ್: ಪಟೇದಾರ್ ಸಮುದಾಯದ ಹೋರಾಟದ ಮೂಲಕ ಬೆಳಕಿಗೆ ಬಂದ ಹಾರ್ದಿಕ್ ಪಟೇಲ್, ಜೈಲಿಗೂ ಹೋಗಿದ್ದರು. ಯುವ ನಾಯಕನಾಗಿ ಗುರುತಿಸಿಕೊಂಡ ಹಾರ್ದಿಕ್ ಪಟೇಲ್, 2019ರಲ್ಲಿ ಕಾಂಗ್ರೆಸ್ ನೊಂದು ಸೇರಿಕೊಂಡರು. ಆದರೆ, ಕಳೆದ ಮೇ 18ರಂದು ಕಾಂಗ್ರೆಸ್ ನೀಡಿದ್ದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಬಿಜೆಪಿ ವಿರುದ್ಧ, ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ 28 ವರ್ಷದ ಯುವ ಲೀಡರ್, ಇದೀಗ ಬಿಜೆಪಿ ಸೇರ್ಪಡೆಗೆ ಸಿದ್ಧನಾಗಿದ್ದಾನೆ. ಕೆಲ ಉನ್ನತ ಮೂಲಗಳ ಮಾಹಿತಿ ಪ್ರಕಾರ ಜೂನ್ 2ರಂದು ಬಿಜೆಪಿ ಸೇರ್ಪಡೆಯಾಗಲಿದ್ದಾನೆ.
ಕಾಂಗ್ರೆಸ್ ಗೆ ರಾಜೀನಾಮೆ ಸಲ್ಲಿಸುವಾಗ ಹಿರಿಯ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದ. ಅದಕ್ಕೂ ಮೊದಲು ಬಿಜೆಪಿ, ಮೋದಿ ಬಗ್ಗೆ ಹೊಗಳಿಕೆ ಮಾತುಗಳನ್ನಾಡಿದ್ದ. ಇದೆಲ್ಲದಕ್ಕೂ ಇದೀಗ ಉತ್ತರ ಸಿಕ್ಕಿದೆ.