ಬಿಜೆಪಿ ಆಡಳಿತದಿಂದ ಜನರು ಬೇಸತ್ತಿದ್ದಾರೆ: ಎಚ್ಡಿಕೆ

120

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಬಿಜೆಪಿ ಸಂಸ್ಕೃತಿ ಏನು ಅನ್ನೋದು ರಾಜ್ಯದ ಜನರಿಗೆ ಗೊತ್ತಾಗಿದೆ. ಬಿಜೆಪಿ ನಾಯಕರು, ಶಾಸಕರಲ್ಲೇ ಕೆಸರು ಎರಚಾಟ ಶುರುವಾಗಿದೆ. ಇವರ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ ಈ ಬಾರಿ ಬಿಜೆಪಿಗೆ ಪಾಠ ಕಲಿಸುತ್ತಾರೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾ ಕಿಡಿ ಕಾರಿದರು.

ಇಂದಿನಿಂದ 15 ದಿನಗಳ ಕಾಲ ಉತ್ತರ ಕರ್ನಾಟಕ ಭಾಗದಲ್ಲಿ ಪಂಚರತ್ನ ಯಾತ್ರೆ ನಡೆಯಲಿದೆ. ಹುಬ್ಬಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, 40 ಪರ್ಸೆಂಟ್ ಸರ್ಕಾರವೋ, 50 ಪರ್ಸೆಂಟ್ ಸರ್ಕಾರವೋ ಅವರಲ್ಲಿಯೇ ಆರೋಪ ಪ್ರತ್ಯಾರೋಪ ನಡೆದಿದೆ. ಇನ್ನು ಸ್ಯಾಂಟ್ರೋ ರವಿ ಪ್ರಕರಣ ಏನೆಲ್ಲ ಮಾಡುತ್ತಾರೆ ನೋಡೋಣ. ತನಿಖೆಯಿಂದ ಏನೆಲ್ಲ ಸತ್ಯಾಂಶ ಬರುತ್ತೆ ಕಾದು ನೋಡೋಣ ಎಂದರು.

ಇಂದಿನಿಂದ ವಿಜಯಪುರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ರತಯಾತ್ರೆ ನಡೆಸಲಿದ್ದಾರೆ. ಇಂದು ಇಂಡಿ, ನಾಳೆ ಸಿಂದಗಿ, ಆನಂತರ ದೇವರ ಹಿಪ್ಪರಗಿ, ವಿಜಯಪುರದಲ್ಲಿ ಯಾತ್ರೆ ನಡೆಸಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!