ಪತಿಯ ಅನುಮಾನಕ್ಕೆ ಪತ್ನಿ ಜೀವ ಹೋಯ್ತು

215

ಪ್ರಜಾಸ್ತ್ರ ಅಪರಾಧ ಸುದ್ದಿ

ಚಿಕ್ಕಬಳ್ಳಾಪುರ: ಅನುಮಾನ ಅನ್ನೋ ಭೂತಕ್ಕೆ ಪತ್ನಿಯೊಬ್ಬಳು ಪತಿಯಿಂದಲೇ ಹತ್ಯೆಯಾದ ದಾರುಣ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚಿಕ್ಕದಿಬ್ಬೂರಹಳ್ಳಿಯಲ್ಲಿ ನಡೆದಿದೆ. ಗಾಯತ್ರಿ(35) ಕೊಲೆಯಾದ ಮಹಿಳೆ. ಪತಿ ಅಶ್ವತ್ಥಪ್ಪ ಕೊಲೆಯ ಆರೋಪಿ.

ಪತ್ನಿಯ ಮೇಲಿನ ಅನುಮಾನಕ್ಕೆ ಪಾಪಿ ಪತಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ತಾಯಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳು ತಬ್ಬಲಿಗಳಾಗಿವೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!