ಪ್ರಜಾಸ್ತ್ರ ಕ್ರೀಡಾ ಸುದ್ದಿ
ಮುಂಬರುವ ಸೌಥ್ ಆಫ್ರಿಕಾ ವಿರುದ್ಧ ಟಿ-20 ಸರಣಿಯಿಂದ ಟೀಂ ಇಂಡಿಯಾ ನಾಯಕ ಕೆ.ಎಲ್ ರಾಹುಲ್ ಹಾಗೂ ಕುಲದೀಪ್ ಯಾದವ್ ಔಟ್ ಆಗಿದ್ದಾರೆ. ಬಿಸಿಸಿಐ ಮೂಲಗಲ ಪ್ರಕಾರ, ಗಾಯದ ಕಾರಣದಿಂದ ಕೆ.ಎಲ್ ರಾಹುಲ್ ಹಾಗೂ ಯಾದವ್ ಟಿ-20 ಸರಣಿಯಲ್ಲಿ ಆಡುತ್ತಿಲ್ಲ.
ಅಖಿಲ ಭಾರತ ಹಿರಿಯರ ಆಯ್ಕೆ ಸಮಿತಿ, ರಿಷಬ್ ಪಂಥರನ್ನು ವಿಕೆಟ್ ಕೀಪರ್ ಹಾಗೂ ನಾಯಕನನ್ನಾಗಿ, ಹಾರ್ದಿಕ್ ಪಾಂಡ್ಯೆನನ್ನು ಉಪ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಟಿ-20 ಸರಣಿ ಭಾರತೀಯ ನೆಲದಲ್ಲಿ ನಡೆಯಲಿದೆ.