ಪ್ರಜಾಸ್ತ್ರ ಸುದ್ದಿ
ಹಾಸನ: ಮದ್ಯ ಸೇವನೆ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳಿವೆ. ಮಿತಿಯಲ್ಲಿದ್ದರೆ ಒಳ್ಳೆಯದು, ಅತಿಯಾದರೆ ಮನೆಹಾಳು ಎನ್ನಲಾಗುತ್ತೆ. ಹೀಗಾಗಿ ಅನೇಕರಿಗೆ ಕುಡುಕರು ಕಂಡರೆ ಆಗುವುದಿಲ್ಲ. ಆದರೆ, ಇನ್ನು ಮುಂದೆ ನೀವು ಹಾಗೇ ಹೇಳಲು ಆಗುವುದಿಲ್ಲ. ಯಾಕಂದರೆ ಅವರಿಗೂ ಒಂದು ಸಂಘ ರೆಡಿಯಾಗಿದೆ.
ಮದ್ಯಪಾನ ಪ್ರಿಯರ ಹೋರಾಟ ಸಂಘ ನೋಂದಣಿಯಾಗಿದೆ. ಅದರ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಮದ್ಯ ಕುಡಿಯುವವರನ್ನು ಕುಡುಕರು ಎನ್ನಬೇಡಿ. ಮದ್ಯ ಪ್ರಿಯರು ಎನ್ನಿ. ಅವರಿಗೆ ಇನ್ಸೂರೆನ್ಸ್ ಸೌಲಭ್ಯ ನೀಡಬೇಕು. ಮದ್ಯ ಕುಡಿದು ಸಾವನ್ನಪ್ಪಿದರೆ ಅವರಿಗೆ ಆರ್ಥಿಕ ಸಹಾಯ ನೀಡಬೇಕು ಎಂದಿದ್ದಾರೆ.
ಕುಡಿದು ಹೆಚ್ಚಾಗಿ ಬಾರ್ ನಲ್ಲಿ ಮಲಗಿದರೆ ಅವರಿಗೆ ಹೊರಗೆ ಕಳುಹಿಸಬಾರದು. ನಾಲ್ಕು ಗಂಟೆ ಅಲ್ಲೆ ಮಲಗಲು ಅವಕಾಶ ಕೊಡಬೇಕು. ಎರಡು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಬೇಕು. ಮದ್ಯಪಾನ ನಿಗಮ ಮಂಡಳಿ ಸ್ಥಾಪಿಸಬೇಕು. ಮದ್ಯಪ್ರಿಯರಿಗೆ ಸೈಟ್ ನೀಡಬೇಕು ಅನ್ನೋದು ಸೇರಿ 18 ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ. ಇದನ್ನು ಕೇಳಿದ ಜನರು ಹುಬ್ಬೇರಿಸುತ್ತಿದ್ದಾರೆ.