‘ಮಹಾ’ ಸರ್ಕಾರ ಪತನದ ಸುಳಿವು ಕೊಟ್ಟ ಸಂಜಯ್ ಟ್ವೀಟ್

185

ಪ್ರಜಾಸ್ತ್ರ ಸುದ್ದಿ

ಮುಂಬೈ: ಇದೀಗ ಎಲ್ಲೆಡೆ ಚರ್ಚೆಯಾಗುತ್ತಿರುವುದು ನೆರೆಯ ಮಹಾರಾಷ್ಟ್ರದ ಆಡಳಿತ ಪಕ್ಷದ ಶಾಸಕರ ಬಂಡಾಯದ ವಿಚಾರ. ಹೀಗಾಗಿ ಉದ್ಭವ್ ಠಾಕ್ರೆ ನಾಯಕತ್ವದ ಮಹಾ ವಿಕಾಸ್ ಅಗಡಿ ಮೈತ್ರಿ ಸರ್ಕಾರ ಪತನವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಶಿವಸೇನೆ ನಾಯಕ, ಸಂಸದ ಸಂಜಯ್ ರಾವುತ್ ಟ್ವೀಟ್ಇದೆ.

‘ವಿಧಾನಸಭೆಯ ವಿಸರ್ಜನೆಯತ್ತ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಪಯಣ’ ಎಂದು ಬರೆದಿದ್ದಾರೆ. ಈ ಟ್ವೀಟ್ ಸಂಚಲನ ಮೂಡಿಸಿದ್ದು, ಶಿವಸೇನೆ, ಕಾಂಗ್ರೆಸ್, ಎನ್ ಸಿಪಿ ಕೂಡಿಕೊಂಡು ರಚನೆ ಮಾಡಿದ ಸರ್ಕಾರ ಅಂತ್ಯವಾಗಲಿದೆ ಅನ್ನೋ ಸೂಚನೆ ಸಿಕ್ಕಿದೆ. ಶಿವಸೇನೆಯ ಲೋಕನಾಥ್ ಶಿಂಧೆ ನೇತೃತ್ವದ ಬಂಡಾಯ ಟೀಂ ಸಂಧಾನಕ್ಕೆ ಸಿದ್ಧವಿಲ್ಲ ಅನ್ನೋದು ಸ್ಪಷ್ಟವಾಗಿದೆ.




Leave a Reply

Your email address will not be published. Required fields are marked *

error: Content is protected !!