ಪ್ರಜಾಸ್ತ್ರ ವಿಶೇಷ ಸಂದರ್ಶನ
ಕಳೆದ ಸುಮಾರು 30ಕ್ಕೂ ಹೆಚ್ಚು ವರ್ಷಗಳಿಂದ ಪ್ರಸೂತಿ ಹಾಗೂ ಶಿಕ್ಷಣ ತಜ್ಞರಾಗಿ ನಾಡಿನ ತುಂಬಾ ಸೇವೆ ಸಲ್ಲಿಸುತ್ತಿರುವ ಧಾರವಾಡದ ಡಾ.ಸಂಜೀವ ಕುಲ್ಕರ್ಣಿ ಅವರು, ಇದರಾಚೆಗೆ ವಿಶಿಷ್ಟ ಹಾಗೂ ಕ್ರಿಯಾತ್ಮಕ ಚಟುವಟಿಕೆ ನಡೆಸುತ್ತಿದ್ದಾರೆ. ಬಾಲ ಬಳಗದ ಮೂಲಕ ಮಕ್ಕಳಿಗೆ ವಿಭಿನ್ನವಾದ ಶಿಕ್ಷಣ ನೀಡುತ್ತಿರುವುದು ಹಾಗೂ ಕಾಡು ತೋಟದ ಮೂಲಕ ಪರಿಸರ, ನೆಲಮೂಲದ ಸಂಸ್ಕೃತಿಯನ್ನು ಕಾಪಾಡುತ್ತಿರುವ ಇವರು ಗಾಂಧಿ ತತ್ವಗಳನ್ನು ಮೈಗೂಡಿಸಿಕೊಂಡಿದ್ದಾರೆ. ಅವರೊಂದಿಗೆ ಪ್ರಜಾಸ್ತ್ರ ವೆಬ್ ಪತ್ರಿಕೆ ಸಂಪಾದಕ ನಾಗೇಶ ತಳವಾರ ಅವರು ನಡೆಸಿದ ಸಂದರ್ಶನ ಇಲ್ಲಿದೆ…