ಪ್ರಜಾಸ್ತ್ರ ಸುದ್ದಿ
ವಿಜಯಪುರ: ನಗರದ ಹೊರವಲಯದಲ್ಲಿರುವ ಇಂಡಿಯಾ ರಿಸರ್ವ್ ಬಟಾಲಿಯನ್ ವಿಜಯಪುರ ಪಡೆಯಲ್ಲಿ, 2022ನೇ ಸಾಲಿನ ಅಂತರ ದಳಗಳ ವಾರ್ಷಿಕ ಕ್ರೀಡಾಕೂಟ ನಡೆಯಿತು. ಮಂಗಳವಾರ ನಡೆದ ಕ್ರೀಡಾಕೂಟವನ್ನು ಜಿಲ್ಲಾಧಿಕಾರಿ ಮಹಾಂತೇಶ್ ದಾನಮ್ಮನವರ ಉದ್ಘಾಟಿಸಿದರು.
ದೇಶದ ಆಂತರಿಕ ಭದ್ರತೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಕಾರ್ಯ ಮಹತ್ವದ್ದಾಗಿದೆ. ಪೊಲೀಸ್ ಸಿಬ್ಬಂದಿ ಸದಾ ಕ್ರಿಯಾಶೀಲವಾಗಿರಬೇಕಿರುವುದರಿಂದ ಆದಷ್ಟು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳವುದರಿಂದ, ಒತ್ತಡ ರಹಿತವಾಗಿ, ಕ್ರಿಯಾಶೀಲರಾಗಿ ಕೆಲಸ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ದಾನಮ್ಮನವರ್ ಹೇಳಿದರು.
ಐಆರ್ ಬಿ ವಿಜಯಪುರ ಪಡೆಯ ಕಮಾಂಡೆಂಟ್ ಎನ್.ಬಿ ಮೆಳ್ಳೆಗಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಡೆಪ್ಯೂಟಿ ಕಮಾಂಡೆಂಟ್ ನಂದಕುಮಾರ್ ಸಂಗದ್, ಸಹಾಯಕ ಕಮಾಂಡೆಂಟ್ ಎನ್.ಪಿ ಯಡಾಲ್, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ವಿಜಯ್ ಠಕ್ಕನ್ನವರ್, ಮಹಾಂತೇಶ್ ಇಟ್ಟಿ, ಪ್ರಸನ್ನ ಲಬ್ಬಾ, ಮಹಾವೀರ ಹಳಿಂಗಂಳಿ, ಹುಸೇನ್ ಲಾಲಕೋಟಿ, ಕಲ್ಲನಗೌಡ ಪಾಟೀಲ, ಅನಿಲಕುಮಾರ್ ಉಂಕಿ, ಮಂಜುನಾಥ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.