ಮನಸೆಳೆದ ಜಗ ನಡೆಯಲಿ ಬುದ್ಧನ ಕಡೆ ಕಾರ್ಯಕ್ರಮ

192

ಪ್ರಜಾಸ್ತ್ರ ಸುದ್ದಿ

ಮೈಸೂರು: ನಾಡಿನ ಖ್ಯಾತ ಗಾಯಕ ಲಕ್ಷ್ಮಿರಾಮ್ ಸಾರಥ್ಯದಲ್ಲಿ ತನುಮನ ಸಂಸ್ಥೆ ವತಿಯಿಂದ ಪ್ರತಿ ತಿಂಗಳು ಹುಣ್ಣಿಮೆ ದಿನ ನಗರದ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ‘ಜಗ ನಡೆಯಲಿ ಬುದ್ಧನ ಕಡೆ’ ಅನ್ನೋ ಕಾರ್ಯಕ್ರಮ ಮಾಡಿಕೊಂಡು ಬರಲಾಗುತ್ತಿದೆ. ಗುರುವಾರ ನಡೆದ ಕಾರ್ಯಕ್ರಮ ಪ್ರೇಕ್ಷಕರ ಮನಸೆಳೆದಿದೆ.

ಕಾರ್ಯಕ್ರಮವನ್ನು ಪ್ರಜಾವಾಣಿ ಬ್ಯೂರೋ ಮುಖ್ಯಸ್ಥರಾದ ಕೆ.ನರಸಿಂಹಮೂರ್ತಿ ಉದ್ಘಾಟಿಸಿದರು. ಮಾಜಿ ಮೇಯರ್ ಪುರುಷೋತ್ತಮ್  ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆರ್.ಮಹದೇವಪ್ಪ, ಹರಿ ಶಂಕರ್, ಎಮ್.ಪುರುಷೋತ್ತಮ್, ಎಸ್.ಎಮ್ ಚರಣ್, ಉತ್ತನಹಳ್ಳಿ ರಂಗಸ್ವಾಮಿ, ಮಧು ಪಿ.ಲಯನ್, ವಿಜಯ್ ಕುಮಾರ್ ಭಾಗವಹಿಸಿದ್ದರು.

ಲಕ್ಷ್ಮಿರಾಮ್ ಮತ್ತು ಅವರ ತಂಡ ಹೊಸ ಹೊಸ ಹಾಡುಗಳನ್ನು ಹಾಡಿ ಜನರನ್ನ ಮಂತ್ರಮುಗ್ಧರನ್ನಾಗಿಸಿದರು.




Leave a Reply

Your email address will not be published. Required fields are marked *

error: Content is protected !!