ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ರಿಲೀಸ್ ಆಗಿದೆ. ಡಿ ಬಾಸ್ ಅಭಿಮಾನಿಗಳು ಚಿತ್ರಕ್ಕೆ ಬಿಗ್ ಓಪನಿಂಗ್ ಕೊಟ್ಟಿದ್ದಾರೆ. ಎಲ್ಲಿ ನೋಡಿದರೂ ಕಾಟೇರ ಚಿತ್ರದ ಬಗ್ಗೆಯೇ ಮಾತುಗಳು ಕೇಳಿ ಬರುತ್ತಿವೆ. ಈ ಚಿತ್ರದ ಮುಂದೆ ಯಾವ ಪ್ಯಾನ್ ಇಂಡಿಯಾ ಸಿನಿಮಾ ಇಲ್ಲ ಅಂತಿದ್ದಾರೆ.
ದೇಶದ ಬೆನ್ನೆಲಬು ಎನ್ನುವ ರೈತರ ಕುರಿತಾಗಿ ಮಾಡಿರುವ ಚಿತ್ರ ಭರ್ಜರಿಯಾಗಿ ಬಂದಿದೆ. ದರ್ಶನ್ ಅವರ ಹಿಂದಿನ 55 ಚಿತ್ರಗಳಲ್ಲಿ ಇದೊಂದು ವಿಭಿನ್ನ ಪ್ರಯೋಗ ಅಂತಿದ್ದಾರೆ. ಜೊತೆಗೆ ಜಾತಿ ವಿಚಾರದ ಕುರಿತಾದ ವಿಷಯ, ವರನಟ ಡಾ.ರಾಜಕುಮಾರ್ ಅವರ ಮಾತುಗಳನ್ನು ಬಳಸಿಕೊಂಡು ರೈತರ ಬದುಕಿನ ಚಿತ್ರಣ ಕಟ್ಟಿಕೊಟ್ಟಿರುವ ಕಾಟೇರ ಸಿನಿಮಾ ಸೂಪರ್ ಇದೆ. ಫ್ಯಾನ್ಸ್ ವಾರ್ ಬಿಟ್ಟು ಸಿನಿಮಾ ನೋಡಬೇಕು ಅಂತಿದ್ದಾರೆ.
ಕಮರ್ಷಿಯಲ್ ಚಿತ್ರದ ಮೂಲಕ ಒಳ್ಳೆಯ ಸಂದೇಶವನ್ನು ಕಾಟೇರ ಚಿತ್ರ ನೀಡುತ್ತೆ. ನಿರ್ದೇಶಕ ತರುಣ್ ಸುಧೀರ್ ಮತ್ತೊಮ್ಮೆ ಸಕ್ಸಸ್ ಚಿತ್ರ ನೀಡುವ ಮೂಲಕ, ಹ್ಯಾಟ್ರಿಕ್ ಗೆಲುವು ಬಾರಿಸಿದ್ದಾರೆ ಎಂದು ಫ್ಯಾನ್ಸ್ ಖುಷಿ ವ್ಯಕ್ತಪಡಿಸುತ್ತಿದ್ದಾರೆ. ದರ್ಶನ್ ಗೆ ಜೋಡಿಯಾಗಿ ಹಿರಿಯ ನಟಿ ಹಾಗೂ ನಿರ್ಮಾಪಕರಾಗಿದ್ದ ದಿವಂಗತ ಕೋಟೆ ರಾಮು ಅವರ ಪುತ್ರಿ ಆರಾಧನಾ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇನ್ನು ಹಿರಿಯ ನಟಿ ಶ್ರುತಿ, ಹಿರಿಯ ನಟರಾದ ವಿನೋದ್ ಆಳ್ವಾ, ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ, ಜಗಪತಿ ಬಾಬು ಹೀಗೆ ಬಹುದೊಡ್ಡ ತಾರಾಬಳಗವಿದೆ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡಿ ಸಿನಿಮಾ ಮಾಡಿದ್ದಾರೆ.