ಮಂಡ್ಯ: ಮಳವಳ್ಳಿ ತಾಲೂಕಿನ ಮಾರ್ಕುಲು ಕೆರೆಯಲ್ಲಿ ನಾಲ್ಕು ಕಾಡಾನೆಗಳು ಬೀಡಾರ ಹೂಡಿವೆ. ಇದನ್ನ ನೋಡಲು ಸುತ್ತಲಿನ ಜನ ಬರ್ತಿದ್ದಾರೆ.
ನಿನ್ನೆ ಸರಗೂರು ಮಠದ ಹಿಂಭಾದಲ್ಲಿರುವ ಬಾಳೆತೋಟದಲ್ಲಿ ಕಾಡಾನೆಗಳು ಹಿಂಡು ಬೀಡಾರ ಹೂಡಿದ್ವು. ಇದ್ರಿಂದಾಗಿ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಇಂದು ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಶಿಂಷಾ ಅರಣ್ಯ ವಲಯಕ್ಕೆ ಆನೆಗಳನ್ನ ಓಡಿಸಲು ನೋಡಿದ್ದಾರೆ. ಆದ್ರೆ, ಆನೆಯ ಹಿಂಡು ಬೇರೆ ಕಡೆ ಹೋಗ್ತಿವೆ.
ಆನೆ ಹಿಂಡು ಓಡಿಸಲು ಅರಣ್ಯ ಇಲಾಖೆಯ 10 ಜನ ಸಿಬ್ಬಂದಿ ಸ್ಥಳದಲ್ಲಿಯೇ ಮುಕ್ಕಾಂ ಹೂಡಿದ್ದು, ಕಾಡಿಗೆ ಓಡಿಸಲು ಹರಸಾಹಸ ಪಡ್ತಿದ್ದಾರೆ. ಆನೆಗಳ ಹಾವಳಿಯಿಂದಾಗಿ ಸುತ್ತಲಿನ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.