ಪ್ರಜಾಸ್ತ್ರ ಸುದ್ದಿ
ಮಂಡ್ಯ: ಮುತ್ತತ್ತಿ ಅರಣ್ಯ ಪ್ರದೇಶದ ಕಾವೇರಿ ನದಿಯಲ್ಲಿ ಈಜಾಡಲು ಹೋಗಿದ್ದ ತಂದೆ, ಮಗ ಸೇರಿ ನಾಲ್ವರು ಮೃತಪಟ್ಟ ಘಟನೆ ನಡೆದಿದೆ. ಮೃತರೆಲ್ಲರೂ ಮೈಸೂರು ಮೂಲದವರಾಗಿದ್ದಾರೆ. ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ಬಂದಿದ್ದರು. ಈ ವೇಳೆ ದುರಂತ ನಡೆದಿದೆ.
ನಾಗೇಶ್(45), ಇವರ ಮಗ ಭರತ್(17), ಮಹಾದೇವ(14) ಹಾಗೂ ಗುರು(32) ಅನ್ನೋ ನಾಲ್ವರು ಮೃತಪಟ್ಟಿದ್ದಾರೆ. ಮೈಸೂರಿನ ಕನಕಗಿರಿ ನಿವಾಸಿಗಳಾದ ರಾಜು, ಭಾಗ್ಯಮ್ಮ ದಂಪತಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದರು. ಹೀಗಾಗಿ 50 ಜನರು ಮುತ್ತತ್ತಿಗೆ ಬಂದಿದ್ದರು.
ತಿಂಡಿ ತಿಂದ ಬಳಿಕ ಕೆಲವರು ಈಜಾಡಲು ನದಿಗೆ ಬಂದಿದ್ದಾರೆ. ಬಾಲಕ ಮಹಾದೇವ ಮಡುವಿನಲ್ಲಿ ಸಿಲುಕೊಂಡಿದ್ದಾನೆ. ಆತನನ್ನು ರಕ್ಷಿಸಲು ಹೋದ ನಾಗೇಶ್ ಸಹ ಮಡುವಿನಲ್ಲಿ ಸಿಲುಕಿಕೊಂಡಿದ್ದಾರೆ. ಆಗ ಮಗ ಭರತ್, ಮತ್ತೋರ್ವ ಗುರು ಅವರನ್ನು ರಕ್ಷಿಸಲು ಹೋಗಿದ್ದಾರೆ. ಎಲ್ಲರೂ ಮಡುವಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.