ಗಬಸಾವಳಗಿ ಗ್ರಾಮಸ್ಥರ ಹೋರಾಟಕ್ಕೆ ದೇವರೆಡ್ಡಿ ಬೆಂಬಲ

103

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಆಲಮೇಲ ತಾಲೂಕಿಗೆ ಸೇರ್ಪಡೆ ಮಾಡಿರುವ ಗಬಸಾವಳಗಿ ಗ್ರಾಮವನ್ನು ಸಿಂದಗಿಯಲ್ಲಿ ಉಳಿಸಿಕೊಳ್ಳಬೇಕು ಎಂದು ಹೇಳಿ ಮಾರ್ಚ್ 25ರಂದು ಹೋರಾಟ ವೇದಿಕೆಯವರು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.

ಸಾಹೇಬಗೌಡ ಬಿರಾದಾರ, ಗಂಗಪ್ಪಗೌಡ ದಾ ಬಿರಾದಾರ, ಗೌಡಪ್ಪಗೌಡ ಬಿರಾದಾರ, ಬಸನಗೌಡ ಬಿರಾದಾರ, ಶಾಂತಗೌಡ ಬಿರಾದಾರ, ಶಿವಶರಣ ಹೆಳವರ ಇವರ ನೇತೃತ್ವದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಸಿಂದಗಿ ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ ಬೆಂಬಲ ಸೂಚಿಸಿದ್ದಾರೆ.

ಗಬಸಾವಳಗಿ ಗ್ರಾಮ ಸಿಂದಗಿಯಲ್ಲಿ ಉಳಿಯಬೇಕು. ಇದು ಅತ್ಯಂತ ಸೂಕ್ತವಾಗಿದೆ. ದೂರದ ಆಲಮೇಲ ತಾಲೂಕಿಗೆ ಸೇರ್ಪಡೆ ಮಾಡಿರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟವರು ಇದಕ್ಕೆ ಪರಿಹಾರ ನೀಡಬೇಕೆಂದು ಚಂದ್ರಶೇಖರ ದೇವರೆಡ್ಡಿ ಈ ವೇಳೆ ಹೇಳಿದರು.




Leave a Reply

Your email address will not be published. Required fields are marked *

error: Content is protected !!