ಬೆಂಗಳೂರು: ಅನಾಥರು, ಬಡವರು, ವೃದ್ಧರು ಹೀಗೆ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ತಂಡವೊಂದು ರೆಡಿಯಾಗಿದೆ. ಅದುವೆ ಕುಂದಾಪುರಿಯನ್ಸ್. ಆ ತಂಡದ ಲೋಗೋವನ್ನ ಸಂಗೀತ ನಿರ್ದೇಶಕ ರವಿ ಬಸ್ರೂರ್ ಬಿಡುಗಡೆ ಮಾಡಿದ್ರು.
ಬೆಂಗಳೂರಿನಲ್ಲಿರುವ ಅವರ ಮನೆಯಲ್ಲಿ ಯಕ್ಷಗಾನದ ವಿನ್ಯಾಸವಿರುವ ಲೋಗೋವನ್ನ ಲಾಂಚ್ ಮಾಡಿದ್ರು. ಉಡುಪಿ ಜಿಲ್ಲೆಯ ಕುಂದಾಪುರದ ಆಸುಪಾಸಿನ ಯುವ ಮನಸ್ಸುಗಳು ಒಂದಾಗಿ ಈ ತಂಡ ಕಟ್ಟಿದ್ದಾರೆ. ಇದರ ಉದ್ಘಾಟನೆಯನ್ನ, ಕುಂದಾಪುರದವರೆಯಾದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಮಾಡಿದ್ರು. 17ಕ್ಕೂ ಹೆಚ್ಚು ಹುಡ್ಗರು ಈ ಒಂದು ತಂಡದಲ್ಲಿದ್ದಾರೆ. ಇವರೆಲ್ಲರಿಗೂ ಅವರು ಶುಭ ಕೋರಿದ್ರು.