ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮೇ 22, 2010 ರಂದು ಸಂಭವಿಸಿದ ವಿಮಾನ ದುರಂತಕ್ಕೆ 10 ಆಗಿದೆ. ಈ ವೇಳೆ ಸಾವನ್ನಪ್ಪಿದವನ ಕುಟುಂಬಕ್ಕೆ 7.6 ಕೋಟಿ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಇದಕ್ಕೆ ವಾರ್ಷಿಕ 9ರಷ್ಟು ಬಡ್ಡಿ ಸೇರಿ ಪಾವತಿಸಿಲು ಸೂಚಿಸಿದೆ.
ಮಹೇಂದ್ರ ಕೊಡ್ಕನಿ ಎಂಬುವರು ಅಂದು ಸಂಭವಿಸಿದ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಒಬ್ಬರು. ಆಗ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಯಾನ ಸಂಸ್ಥೆ ಪರಿಹಾರ ನೀಡಿತ್ತು. ಆದ್ರೆ, ಇದು ನ್ಯಾಯಸಮತವಲ್ಲವೆಂದು ಕೊಡ್ಕನಿ ಕುಟುಂಬಸ್ಥರು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ರು. ಇದೀಗ ಸುಪ್ರೀಂ ಕೋರ್ಟ್, ಮಹೇಂದ್ರ ಪತ್ನಿ ಹಾಗೂ ಪುತ್ರಿ, ಪುತ್ರನಿಗೆ 7.6 ಕೋಟಿ ಪರಿಹಾರವನ್ನ ಶೇಕಡ 9ರಷ್ಟು ಬಡ್ಡಿ ಸಮೇತ ಕೊಡಲು ಸೂಚಿಸಿದೆ.
ಘಟನೆ ಹಿನ್ನೆಲೆ:
ಮೇ 22, 2010ರಂದು ದುಬೈನಿಂದ ಮಂಗಳೂರಿಗೆ ಬಂದಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ, ಲ್ಯಾಂಡ್ ಆಗುವ ಟೈಂನಲ್ಲಿ ರನ್ ವೇಯಿಂದ ಜಾರಿ ಕಂದಕ್ಕೆ ಬಿದ್ದಿತ್ತು. ಇದರ ಪರಿಣಾಮ, 160 ಜನ ಪ್ರಯಾಣಿಕರು, 6 ಜನ ಸಿಬ್ಬಂದಿ ಸೇರಿ 166 ಜನರನ್ನ ಕರೆದುಕೊಂಡು ಬಂದಿತ್ತು. ಈ ದುರಂತದಲ್ಲಿ 158 ಜನ ಸಾವನ್ನಪ್ಪಿದ್ರೆ, 8 ಜನ ಪವಾಡದ ರೀತಿಯಲ್ಲಿ ಬದುಕಿದ್ರು.