ಸಿಂದಗಿ: ಕರೋನಾ ಲಾಕ್ ಡೌನ್ ನಿಂದಾಗಿ ಎಲ್ಲವೂ ಬಂದ್ ಆಗಿ, ಮೂಕ ಪ್ರಾಣಿಗಳು ಹಸುವಿನಿಂದ ಬಳಲುತ್ತಿವೆ. ಇದನ್ನ ಮನಗಂಡ ಯುವಕರ ಗುಂಪೊಂದು ಪಟ್ಟಣದಲ್ಲಿರುವ ಬೀದಿ ರಾಸುಗಳಿಗೆ ಒಣಮೇವು ಒದಗಿಸುವ ಮೂಲಕ ಅವುಗಳ ರಕ್ಷಣೆಗೆ ನಿಂತಿದೆ.
ತಾಲೂಕಿನ ಕನ್ನೊಳ್ಳಿ ಗ್ರಾಮದ ಶ್ರೀರಾಮ ಸೇನೆ ವತಿಯಿಂದ ರಾಸುಗಳಿಗೆ ಒಣ ಮೇವು ನೀಡ್ತಿದ್ದಾರೆ. ಸಿಂದಗಿ ಪಟ್ಟದ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ವಾಸವಾಗಿರುವ ಗೋವುಗಳಿಗೆ ತಮ್ಮ ಜಮೀನುಗಳಲ್ಲಿನ ಒಣ ಮೇವು ತಂದು ನೀಡ್ತಿದ್ದಾರೆ. ಇದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಇದೆ ರೀತಿ ಮುಂದಿನ ದಿನಗಳಲ್ಲಿ ಉಳಿದವರು ಸಹ ಮಾಡಬಹುದು.
ಕನ್ನೊಳ್ಳಿಯ ಶ್ರೀರಾಮ ಸೇನೆ ಸದಸ್ಯರಾದ ಪ್ರಕಾಶ ಪಾರಸನಳ್ಳಿ, ಕುಮಾರ ಕುಂಬಾರ, ಸಂಗು ಬಿರಾದರ, ಶಿವು ಆಹೇರಿ, ಬಲಭೀಮ ಚೌದರಿ, ಶರಣು ಸಿಂದಗಿ, ಪಪ್ಪು ಪಾಟೀಲ, ಸಚೀನ ಯಾಳವಾರ, ಮಂಜುನಾಥ ಮೂಡಗಿ, ಮಂಜು ಪಾಟೀಲ, ಮಲ್ಲು ಪಾರಸನಳ್ಳಿ, ವಿಶ್ವನಾಥ ಪಾಟೀಲ, ಮಲಕಣಗೌಡ ಬಿರಾದರ ಸೇರಿದಂತೆ ಅನೇಕ ಯುವಕರು ಒಂದೊಳ್ಳೆ ಕೆಲಸ ಮಾಡ್ತಿದ್ದಾರೆ.