ಪ್ರಜಾಸ್ತ್ರ ಸುದ್ದಿ
ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಸಂಸದ ರಾಹುಲ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತದ ಭೂ ಪ್ರದೇಶವನ್ನ ಚೀನಾಗೆ ಬಿಟ್ಟುಕೊಟ್ಟಿದ್ದಾರೆ. ಇದಕ್ಕೆ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್ ಉತ್ತರ ನೀಡಬೇಕೆಂದು ಕೇಳಿದ್ದಾರೆ.
ಡೆಪ್ಸಂಗ್ ಪ್ರಸ್ಥಭೂಮಿ, ಗೊಗ್ರಾ, ಹಾಟ್ ಸ್ಪ್ರಿಂಗ್ ಪ್ರದೇಶಗಳಿಂದ ಚೀನಾ ತನ್ನ ಸೈನಿಕರನ್ನ ಹಿಂದಕ್ಕೆ ಕರೆಸಿಕೊಂಡಿಲ್ಲ. ನಮ್ಮ ಸೈನಿಕರು ಕೈಲಾಶವನ್ನ ಕಷ್ಟಪಟ್ಟು ವಶಪಡಿಸಿಕೊಂಡಿದ್ದಾರೆ. ಅವರಿಗೆ ಅಲ್ಲಿಂದ ಹಿಂದಕ್ಕೆ ಸರೆಯಿರಿ ಎನ್ನಲಾಗ್ತಿದೆ. ಇದ್ರಿಂದ ಏನು ಲಾಭವಾಯ್ತು ಎಂದು ರಾಹುಲ ಗಾಂಧಿ ಪ್ರಶ್ನಿಸಿದ್ದಾರೆ.
ಭಾರತದ ಪ್ರದೇಶಗಳನ್ನ ಚೀನಾಗೆ ಬಿಟ್ಟುಕೊಟ್ಟು ಅವರ ಎದುರು ತಲೆ ತಗ್ಗಿಸಿ ನಿಂತಿದ್ದಾರೆ. ಮೋದಿ ಒಬ್ಬ ಹೇಡಿ. ಚೀನಾ ಎದುರಿಸುವ ತಾಕತ್ತು ಅವರ ಬಳಿಯಿಲ್ಲವೆಂದು ಕಿಡಿ ಕಾರಿದ್ದಾರೆ.