ಯುವಕನ ಹತ್ಯೆ: ನಾಲ್ವರ ಬಂಧನ

232

ಪ್ರಜಾಸ್ತ್ರ ಅಪರಾಧ ಸುದ್ದಿ

ಹುಬ್ಬಳ್ಳಿ: ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏಪ್ರಿಲ್ 10ರಂದು ದಾಖಲಾಗಿದ್ದ ಯುವಕನ ಹತ್ಯೆ ಪ್ರಕರಣ ಸಂಬಂಧ ನಾಲ್ವರನ್ನ ಬಂಧಿಸಲಾಗಿದೆ. ನಿಯಾಜ ಅಹಮದ ಕಟಿಗಾರ, ಅಲ್ತಾಫ ಮುಲ್ಲಾ, ತೌಸೀಫ ಚೆನ್ನಾಪುರ ಹಾಗೂ ಅಮನ ಗಿರಿಣಿವಾಲೆ ಎಂಬುವರನ್ನ ಬಂಧಿಸಲಾಗಿದೆ.

ರಾಕೇಶ ಕಠಾರೆ ಅನ್ನೋ ಯುವಕನ್ನ ಹತ್ಯೆ ಮಾಡಿದ್ರು. ಬಳಿಕ ಅಂಗಾಂಗಳನ್ನ ಬೇರ್ಪಡಿಸಿ ಬೇರೆ ಬೇರೆ ಕಡೆ ಎಸೆದು ಹೋಗಿದ್ರು. ರಾಕೇಶ ತಂಗಿಯನ್ನ ನಿಯಾಜ ಅಹಮದ ಕಟಿಗಾರ ಪ್ರೀತಿ ಮಾಡ್ತಿದ್ದನಂತೆ. ಇದಕ್ಕೆ ರಾಕೇಶ ವಿರೋಧ ವ್ಯಕ್ತಪಡಿಸಿದ್ದನಂತೆ. ಹೀಗಾಗಿ ಆತನನ್ನ ಕೊಲೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.

ಈ ಪ್ರಕರಣ ಪ್ರೀತಿಯ ವಿಚಾರದಲ್ಲಿ ಸಿಲುಕಿಕೊಂಡಿದೆ. ಹೀಗಾಗಿ ಯುವತಿಯನ್ನ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಲಾಗಿದೆ. ತನಿಖೆ ಪೂರ್ತಿಯಾದ್ಮೇಲೆ ಮಾಹಿತಿ ನೀಡಲಾಗುವುದು ಎಂದು ಎಸ್ಪಿ ಕೃಷ್ಣಕಾಂತ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!