ಪ್ರಜಾಸ್ತ್ರ ಅಪರಾಧ ಸುದ್ದಿ
ಬಂಟ್ವಾಳ: ಬೈಕ್ ಹಾರ್ನ್ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಬಿ.ಸಿ ರೋಡಿನ ಶಾಂತಿಯಂಗಡಿ ಹತ್ತಿರ ಈ ಕೃತ್ಯ ಕಳೆದ ರಾತ್ರಿ ನಡೆದಿದೆ. ಮಹಮ್ಮದ್ ಆಸಿಫ್ ಕೊಲೆಯಾದ ಯುವಕ.
ಪೊನ್ನೋಡಿಯ ಹೋಟೆಲ್ ಎದುರು ಪದೆಪದೆ ಹಾರ್ನ್ ಹಾಕುತ್ತಾನೆ ಅನ್ನೋ ಕಾರಣಕ್ಕೆ ಮಹಮ್ಮದ್ ನೌಫೆಲ್, ಮಹಮ್ಮದ್ ನೌಸಿರ್ ಎಂಬುವರು ನಡುವೆ ಜಗಳವಾಗಿದೆ. ಜಗಳ ಅತಿರೇಕಕ್ಕೆ ಹೋಗಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಈ ಸಂಬಂಧ ಶಾಂತಿಯಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.