ಕ್ಷುಲ್ಲಕ ಕಾರಣಕ್ಕೆ ಧಾರವಾಡದಲ್ಲಿ ಕೊಲೆ

220

ಪ್ರಜಾಸ್ತ್ರ ಅಪರಾಧ ಸುದ್ದಿ

ಧಾರವಾಡ: ರಸ್ತೆಯಲ್ಲಿ ನಿಂತಿದ್ದ ಬೈಕ್ ಪಕ್ಕಕ್ಕೆ ತೆಗೆಯಿರಿ ಎನ್ನುವ ಸಣ್ಣ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ವಿದ್ಯಾಕಾಶಿಯಲ್ಲಿ ನಡೆದಿದೆ. ಕಲ್ಲನಗೌಡ ಪಾಟೀಲ ಕೊಲೆಯಾದ ಯುವಕ.

ಅಳ್ನಾವರ ತಾಲೂಕಿನ ಅರವಟಗಿ ಗ್ರಾಮದ ನಿವಾಸಿ ಕಲ್ಲನಗೌಡ ಪಾಟೀಲ ಹಾಗೂ ತಡಸಿನಕೊಪ್ಪ ಗ್ರಾಮದ ಸ್ನೇಹಿತ ಸುನಿಲ್ ಜಕ್ಕಣ್ಣವರ ಜೊತೆಗೆ ಕಾರಿನಲ್ಲಿ ಬಂದವರು ಗಲಾಟೆ ಮಾಡಿದ್ದಾರೆ. ಗಲಾಟೆಯಲ್ಲಿ ಗಂಭೀರವಾಗ ಹಲ್ಲೆಗೊಳಗಾದ ಕಲ್ಲನಗೌಡ ಮೃತಪಟ್ಟರೆ, ಸುನಿಲ್ ಗಂಭೀರವಾಗಿ ಗಾಯಗೊಂಡಿದ್ದಾನೆ.

ಇವರಿಬ್ಬರು ಸೈಟ್ ವೊಂದರ ದಾಖಲೆ ತೋರಿಸಲು ಮನಸೂರು ಗ್ರಾಮಕ್ಕೆ ಹೋಗಿ ವಾಪಸ್ ಆಗುತ್ತಿದ್ದರು. ಓಂ ಆಶ್ರಮದ ಹತ್ತಿರ ಬೈಕ್ ನಿಲ್ಲಿಸಿ ಸುನಿಲ್ ಮೂತ್ರ ವಿಸರ್ಜನೆಗೆ ಹೋಗಿದ್ದಾನೆ. ಕಲ್ಲನಗೌಡ ಬೈಕ್ ನಲ್ಲಿ ಕುಳಿತಿದ್ದಾನೆ. ಆಗ ಕಾರೊಂದು ಬಂದಿದೆ. ಬೈಕ್ ಪಕ್ಕಕ್ಕೆ ತೆಗೆಯಿರಿ ಎಂದಿದ್ದಾರಂತೆ. ನಿಮ್ಮ ಕಾರು ಹೋಗುತ್ತೆ ಹೋಗಿ ಎಂದಿದ್ದಾನಂತೆ. ಇಷ್ಟೆ ವಿಚಾರಕ್ಕೆ ಗಲಾಟೆಯಾಗಿದೆ ಎಂದು ಹಲ್ಲೆಗೊಳಗಾದ ಸುನಿಲ್ ಹೇಳುತ್ತಿದ್ದಾನೆ.

ಈ ಘಟನೆ ಸಂಬಂಧ ಬೀರಪ್ಪ, ಬಸವರಾಜ್ ಕುರಿ ಎಂಬುವರು ಸೇರಿ ಐವರ ಬಂಧನವಾಗಿದೆ. ಗಲಾಟೆ ಮಾಡಿಕೊಂಡವರೆಲ್ಲ ಕಾಂಗ್ರೆಸ್, ಬಿಜೆಪಿ ಕಡೆಯವರೆಂದು ಹೇಳಲಾಗುತ್ತಿದ್ದು, ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ.




Leave a Reply

Your email address will not be published. Required fields are marked *

error: Content is protected !!