ಮುರುಘಾ ಸ್ವಾಮೀಜಿ ಪ್ರಕರಣ: 3 ಕೋಟಿಯ ಆಫರ್ ನೀಡಿದ್ಯಾರು?

233

ಪ್ರಜಾಸ್ತ್ರ ಸುದ್ದಿ

ಮೈಸೂರು: ಪೊಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿಗಳ ರಕ್ಷಣೆಗೆ ತೆರೆಮರೆಯಲ್ಲಿ ಕೆಲಸ ನಡೆಯುತ್ತಿದೆ ಅನ್ನೋದು ತಿಳಿದು ಬಂದಿದೆ. ಸ್ವಾಮೀಜಿ ವಿರುದ್ಧ ದೂರು ಸಲ್ಲಿದವರಿಗೆ ಬರೋಬ್ಬರಿ 3 ಕೋಟಿ ರೂಪಾಯಿಯ ಆಫರ್ ನೀಡಲಾಗಿದೆಯಂತೆ.

ಮಠ ಹಾಗೂ ರಾಜಕೀಯ ನಾಯಕನೋರ್ವ ತಮಗೆ ಆಮಿಷ ಒಡ್ಡಿದ್ದಾರೆ ಎಂದು ಒಡನಾಡಿ ಸಂಸ್ಥೆಯ ಪರಶು ಆರೋಪಿಸಿದ್ದಾರೆ. ಆದರೆ, ತಮಗೆ ಕೋಟಿ ಕೋಟಿ ಹಣದ ಆಫರ್ ನೀಡಿದ್ದು ಯಾರು ಅನ್ನೋದು ಹೇಳಿಲ್ಲ. ಮಹಿಳೆಯೊಬ್ಬರ ಮೂಲಕ ಆಮಿಷ ಒಡ್ಡಲಾಗುತ್ತಿದೆ. ಅವರಿಗೆ ಛಿಮಾರಿ ಹಾಕಿದ್ದೇನೆ ಎಂದಿದ್ದಾರೆ.

ಇನ್ನು ಈ ಪ್ರಕರಣ ಸಂಬಂಧ ಲೋಕಾಯುಕ್ತರಿಗೆ ದೂರು ಸಲ್ಲಿಸಬೇಕಾ? ಕಾನೂನಿನಲ್ಲಿ ನಮಗೆ ಯಾವೆಲ್ಲ ಅವಕಾಶಗಳಿವೆ ಅನ್ನೋದನ್ನು ನಮ್ಮ ವಕೀಲರ ಜೊತೆಗೆ ಚರ್ಚಿಸುತ್ತೇನೆ. ಮೊದಲು ಸಂತ್ರಸ್ತ ಮಕ್ಕಳಿಗೆ ನ್ಯಾಯ ಸಿಗಬೇಕು ಅನ್ನೋ ಉದ್ದೇಶ ನಮ್ಮದಾಗಿದೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!