ಪ್ರಜಾಸ್ತ್ರ ಸುದ್ದಿ
ಮೈಸೂರು: ದಸರಾ ಸಾಂಸ್ಕೃತಿ ಕಾರ್ಯಕ್ರಮಗಳು ಭರ್ಜರಿಯಾಗಿ ನಡೆಯುತ್ತಿವೆ. ಯುವ ದಸರಾ ಬಳಿಕ ಇದೀಗ ಪ್ರಮುಖ ಕಾರ್ಯಕ್ರಮಗಳು ನಡೆಯುತ್ತಿದ್ದು, ಹಾಡು, ಕುಣಿತ ಜೋರಾಗಿದೆ. ನಗರದ ಕಲಾ ಮಂದಿರದಲ್ಲಿ ನಾಡಿನ ಖ್ಯಾತ ಗಾಯಕ ಲಕ್ಷ್ಮಿರಾಮ್ ಸಾರಥ್ಯದ ತಂಡದ ಗಾಯನ ಎಲ್ಲರನ್ನು ಮೋಡಿ ಮಾಡಿದೆ.
ಅಂಬೇಡ್ಕರ್ ಗೀತೆಗಳ ಗಾಯನದಲ್ಲಿ ಗಾಯಕ ಲಕ್ಷ್ಮಿರಾಮ್, ಶೇಷಣ್ಣ, ಚಿಕ್ಕನಂದಿ, ಮಹಾದೇವಸ್ವಾಮಿ, ಬಾಲ ಗಾಯಕರಾದ ದೀಕ್ಷಾ, ಶ್ರಾವ್ಯ ಅವರ ಕಂಠಸಿರಿಯಲ್ಲಿ ಬಂದ ಹಾಡುಗಳು ಪ್ರೇಕ್ಷಕರಿಗೆ ಖುಷಿ ನೀಡಿವೆ.
ಗಾಯನಕ್ಕೆ ಶಿವಕುಮಾರ್-ಕೀಬೋರ್ಡ್, ಮಹೇಂದ್ರ ವರ್ಮಾ-ತಬಲಾ, ಕಿರಣ್-ರಿದಮ್ ಪ್ಯಾಡ್ ಸಾಥ್ ನೀಡಿದರು.