ಪಾಂಡವಪುರ: ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನ ಖರೀದಿಸಲು ಪೊಲೀಸರು ಅವಕಾಶ ಮಾಡಿಕೊಟ್ಟರೆ, ಅದನ್ನ ದುರುಪಯೋಗ ಪಡಿಸಿಕೊಳ್ಳುತ್ತಿರುವ ಘಟನೆ ಇಂದು ಸಂತೆ ಮೈದಾನದಲ್ಲಿ ನಡೆದಿದೆ.
ಭಾರತದಲ್ಲಿ ಮೂರನೇ ಹಂತ ಪ್ರವೇಶಿಸಿರುವ ಮಹಾಮಾರಿ ಕರೋನಾ ತಡೆಗಟ್ಟಲು ತಾಲೂಕು ಆಡಳಿತ ಎಷ್ಟೇ ಸೂಚನೆ ಸಲಹೆ ನೀಡಿದ್ದರೂ ಸಾರ್ವಜನಿಕರು ಯಾವುದೇ ಭಯವಿಲ್ಲದೇ ಸಾಮಾಜಿಕ ಅಂತರವನ್ನ ಕಾಪಾಡಿಕೊಳ್ಳದೆ ಸಂತೆಯಲ್ಲಿ ವ್ಯಾಪಾರ ವಹಿವಾಟು ನಡೆಸಿದ್ರು. ಪೊಲೀಸರು, ಪುರಸಭೆ ಅಧಿಕಾರಿಗಳು ಮಾರಾಟಗಾರರಿಗೆ ಅಂತರ ಕಾಯ್ದು ವ್ಯಾಪಾರ ಮಾಡುವಂತೆ ಮುನ್ಸೂಚನೆ ನೀಡಿದ್ದು, ಹೊಳೆಯಲ್ಲಿ ಹುಣುಸೆಹಣ್ಣು ಕಿವುಚಿದಂತೆ ಆಗಿತ್ತು ಇಂದಿನ ಪರಿಸ್ಥಿತಿ.
ಮಾತಿಗೆ ಬಗ್ಗದವರು ಲಾಠಿಗೆ ಓಡಿದರು:
ಸಂತೆ ಮೈದಾನದಲ್ಲಿನ ಪರಿಸ್ಥಿತಿಯನ್ನ ಅರಿತ ಪೊಲೀಸರು ಮಾತಿಗೆ ಬಗ್ಗದ ಜನರನ್ನು ಲಾಠಿ ಬಿಸಿ ಮುಟ್ಟಿಸಿದ್ರು. ಇದ್ರಿಂದಾಗಿ ಕ್ಷಣ ಮಾತ್ರದಲ್ಲಿ ಜನರು ಚದುರಿದರು. ಅಲ್ದೇ, ವ್ಯಾಪಾರವನ್ನ ಸಹ ಸ್ಥಗಿತಗೊಳಿಸಿದ್ರು.