ಬಡವರಿಗೆ ದಿನಸಿ ನೀಡಿದ ಬಿ.ಬಿ ಇಂಗಳಗಿ ಯುವಕರು

460

ದೇವರಹಿಪ್ಪರಗಿ: ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಬಿ.ಬಿ ಇಂಗಳಗಿ ಗ್ರಾಮದ ಯುವಕರು ಬಡಜನರು ಹಾಗೂ ವೃದ್ಧರಿಗೆ ದಿನಸಿ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಜಾತಿ, ಧರ್ಮ ಯಾವುದಾದರೇನು? ಮನುಷ್ಯ ಜನ್ಮ ಒಂದೇ ಅಲ್ವೆ. ಇವತ್ತಿನ ಪರಿಸ್ಥಿತಿಯಲ್ಲಿ ಬಡವ, ಶ್ರೀಮಂತರ ಸ್ಥಿತಿ ಒಂದೆಯಾಗಿದೆ.

ಇಂಥಾ ಟೈಂನಲ್ಲಿ ಬಿ.ಬಿ ಇಂಗಳಗಿ ಗ್ರಾಮದ ಕೆಲ ಯುವಕರು ಸೇರಿಕೊಂಡು ಸುಮಾರು 25ಕ್ಕೂ ಹೆಚ್ಚು ಬಡಕುಟುಂಬಗಳಿಗೆ ದಿನಸಿ ವಸ್ತುಗಳನ್ನ ನೀಡಿದ್ದಾರೆ. ಈ ವೇಳೆ ಮಾತ್ನಾಡಿದ ಕೆಲವರು, ಕರೋನಾ ಹಲವು ದೇಶಗಳಲ್ಲಿ ವ್ಯಾಸಿದೆ. ಆದಕಾರಣ ನಮ್ಮ ದೇಶದ ಪ್ರಧಾನ ಮಂತ್ರಿಗಳು ನಾವೆಲ್ಲರೂ ಆರೋಗ್ಯವಾಗಿರಬೇಕೆಂದರೆ, ಮನೆಯಲ್ಲಿ ಇರಬೇಕು. ನಮ್ಮ ಜೊತೆ ನಮ್ಮ ಕುಟುಂಬವು ಆರೋಗ್ಯವಾಗಿರಬೇಕೆಂದು ಹೇಳಿದ್ದಾರೆ. ಆದರೆ ಕೆಲ ಬಡ ಜನರಿಗೆ ನಿತ್ಯದ ಬದುಕಿನಲ್ಲಿ ಸ್ವಲ್ಪ ಅಡೆತಡೆಗಳು ಆಗಿದ್ದರೂ ಅದನ್ನು ಮೆಟ್ಟಿ ನಿಂತು ಸರ್ಕಾರದ ಆದೇಶಗಳನ್ನು ಪಾಲಿಸುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಇಬ್ರಾಹಿಂ ದೊಡ್ಡಮನಿ, ದಾವೂದ, ಕಾಸೀಂ,  ಉಸ್ಮಾನ ಪಟೇಲ ಬಿರಾದಾರ, ನಜೀರ ದೊಡ್ಡಮನಿ ಹಾಗೂ ರಿಯಾಜ ದೊಡ್ಡಮನಿ ಸೇರಿದಂತೆ ಹಲವರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!