ರಾಯಚೂರು: ರಾಜ್ಯಕ್ಕೆ ಹೊರ ರಾಜ್ಯ ಹಾಗೂ ದೇಶದಿಂದ ಈರುಳ್ಳಿ ಆಮದಾಗ್ತಿರುವ ಕಾರಣ ಇಲ್ಲಿನ ಕೃಷಿ ಉತ್ಪನ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿ ಸ್ಥಿಗತಿಗೊಳಿಸಲಾಗಿದೆ. ಇದ್ರಿಂದಾಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ದೇ, ಪ್ರತಿಭಟನೆ ಸಹ ನಡೆಸಿದ್ರು.
ಪ್ರತಿ ಕಿಟ್ವಾಂಲ್ ಗೆ 15 ಸಾವಿರ ರೂಪಾಯಿಯಿದ್ದ ಈರುಳ್ಳಿ ಏಕಾಏಕಿ 5 ಸಾವಿರ ರೂಪಾಯಿಗೆ ಇಳಿಕೆಯಾಗಿದೆ. ಹೀಗಾಗಿ ಆಕ್ರೋಶಗೊಂಡ ರೈತರು ಪ್ರತಿಭಟನೆ ನಡೆಸಿದ್ರು. ಈ ವೇಳೆ ಸ್ಥಳಕ್ಕೆ ಬಂದ ಎಸ್ಪಿ ಡಾ.ಎಸ್.ಬಿ ವೇದಮೂರ್ತಿ, ಎಪಿಎಂಸಿ ಅಧಿಕಾರಿಗಳು ಹಾಗೂ ರೈತರು ಸಭೆ ನಡೆಸಿದ್ರು. ಆಗ ರೈತರು ತಾವು ತಂದಿರುವ ಈರುಳ್ಳಿ ಖರೀದಿಸುವಂತೆ ಒತ್ತಾಯಿಸಿದ್ರು. ಈ ವೇಳೆ ಮಾತ್ನಾಡಿದ ಎಪಿಎಂಸಿ ಅಧಿಕಾರಿಗಳು, ನಾಳೆಯಿಂದ ಖರೀದಿಯನ್ನ ಮುಂದುವರೆಸುವುದಾಗಿ ಹೇಳಿದ್ಮೇಲೆ ರೈತರು ಪ್ರತಿಭಟನೆಯಿಂದ ಹಿಂದೆ ಸರಿದ್ರು.