ಹುಳಿಮಾವು ಕೆರೆಕಟ್ಟೆ ಒಡೆದ ಪ್ರಕರಣ: ಒಬ್ಬರ ಬಂಧನ

341

ಬೆಂಗಳೂರು: ಇಲ್ಲಿನ ಹುಳಿಮಾವು ಕೆರೆಕಟ್ಟೆ ಒಡೆದ ಪ್ರಕರಣ ಸಂಬಂಧ ಇಬ್ಬರು ಹೋಮ್ ಗಾರ್ಡ್ ಗಳನ್ನ ಬಂಧಿಸಲಾಗಿದೆ. ಪೊಲೀಸ್ ಹೋಮ್ ಗಾರ್ಡ್ ಗಳಾದ ಸಾಯಿನಾಥ ರೆಡ್ಡಿ ಹಾಗು ನಾಗರಾಜ ಎಂಬುವರನ್ನ ಬಂಧಿಸಲಾಗಿದೆ.

ಈ ಪ್ರಕರಣ ಸಂಬಂಧ ಈ ಮೊದ್ಲು ಮೂವರನ್ನ ಅರೆಸ್ಟ್ ಮಾಡಲಾಗಿದೆ. ಕೆರೆ ಒತ್ತುವರಿ ನೋಡಿಕೊಳ್ಳಲು ಬಿಬಿಎಂಪಿ ಇಬ್ಬರನ್ನ ನೇಮಿಸಲಾಗಿತ್ತು. ಕೆರೆಯ ಒಳಹರಿವು ಹೆಚ್ಚಾದಾಗ ಎಇಗೆ ಸಾಯಿನಾಥ ರೆಡ್ಡಿ ತಿಳಿಸಿದ್ರು. ಆಗ ಕೋಡಿ ಜಾಗದಲ್ಲಿ ನೀರು ಬಿಡಲು ಎಇ ಶಿಲ್ಪಾ ಹೇಳಿದ್ರಂತೆ.

ಎಇ ಸೂಚನೆ ಮೇರೆಗೆ ಜೆಸಿಬಿ ತಂದು ಹಳೆ ನೀರು ಹೋಗುವ ಜಾಗದಲ್ಲಿ ಕೆಲಸ ನಡೆಸಿದ್ರು. ಜೆಸಿಬಿ ಚಾಲಕ ಹೆಚ್ಚಿನ ಪ್ರಮಾಣದಲ್ಲಿ ಕಾಲುವೆ ಮಾಡಿದ ಪರಿಣಾಮ ಅನಾಹುತ ಸಂಭವಿಸಿದೆ ಅಂತಾ ಹೇಳಲಾಗ್ತಿದೆ. ಈ ಸಂಬಂಧ ಇಬ್ಬರು ಪೊಲೀಸ್ ಹೋಮ್ ಗಾರ್ಡ್ ಗಳನ್ನ ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!