ಅಂತಾರಾಷ್ಟ್ರೀಯ ಸುದ್ದಿ:
ನ್ಯೂಯಾರ್ಕ್: ಪಾಕಿಸ್ತಾನಕ್ಕಿಂತ ಭಾರತದ ಬಗ್ಗೆ ನಾನು ಹೆಚ್ಚು ಆತಂಕಕ್ಕೆ ಒಳಗಾಗಿದ್ದೇನೆ ಎಂದು ಪಾಕ್ ಪ್ರಧಾನಿ ಇರ್ಮಾನ ಖಾನ್ ಹೇಳಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಪಾಕ್ ಪ್ರಧಾನಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೂ ಮೊದ್ಲು ಮಾಧ್ಯಮದ ಜೊತೆ ಮಾತ್ನಾಡಿದ್ರು.
ಪಾಕಿಸ್ತಾನಕ್ಕಿಂತ ಸದ್ಯ ಭಾರತದಲ್ಲಿರುವ ಪರಿಸ್ಥಿತಿ ಬಗ್ಗೆ ಹೆಚ್ಚು ಆತಂಕಕ್ಕೆ ಒಳಗಾಗಿದ್ದೇನೆ. ಕಳೆದ ಆರು ವರ್ಷಗಳಲ್ಲಿ ಭಾರತದಲ್ಲಿ ಭಯಾನಕ ಬೆಳವಣಿಗೆಗಳು ನಡೆದಿವೆ. ನನ್ಗೆ ತಿಳಿದಿರುವ ಮಹಾತ್ಮ ಗಾಂಧಿ ಹಾಗೂ ಜವಾಹರಲಾಲ್ ನೆಹರು ಅವರ ಭಾರತ ಅಲ್ಲ ಅಂತಾ ಪ್ರಧಾನಿ ಮೋದಿ ಹೆಸರು ಪ್ರಸ್ತಾಪಿಸದೆ ಎನ್ ಡಿಎ ಸರ್ಕಾರದ ವಿರುದ್ಧ ಟೀಕಿಸಿದ್ದಾರೆ.
ಭಾರತ ಸರಿಯಾದ ಹಾದಿಯಲ್ಲಿ ಹೋಗುತ್ತಿಲ್ಲ. ಇದು ಕೈಮೀರಿ ಹೋಗುವ ಮೊದ್ಲು ವಿಶ್ವಸಮುದಾಯ ಎಚ್ಚೆತ್ತುಕೊಳ್ಳಬೇಕು ಅಂತಾ ಪಾಕ್ ಪ್ರಧಾನಿ ಇರ್ಮಾನ ಖಾನ್ ಹೇಳಿದ್ದಾರೆ.