ಬೆಂಗಳೂರು: ಹಿನ್ನೆಲೆ ಗಾಯಕಿ ಸುಶ್ಮಿತಾ ಆತ್ಮಹತ್ಯೆ ಪ್ರಕರಣ ಸಂಬಂಧ ತಲೆ ಮರೆಸಿಕೊಂಡಿದ್ದ ಪತಿ ಸೇರಿದಂತೆ ಮೂವರನ್ನ ಬಂಧಿಸಲಾಗಿದೆ. ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸ್ರು ಪತಿ ಶರತ, ಆತನ ದೊಡ್ಡಮ್ಮ ವೈದಹಿ ಹಾಗೂ ಸಹೋದರಿ ಗೀತಾಳನ್ನ ಬಂಧಿಸಿದ್ದಾರೆ.
ಹಿನ್ನೆಲೆ ಗಾಯಕಿ ಸುಶ್ಮಿತಾ ಕೆಲ ದಿನಗಳ ಹಿಂದೆ ಮಾಳಗಾಳದಲ್ಲಿರುವ ತಮ್ಮನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಳು. ತನ್ನ ಸಾವಿಗೆ ಪತಿ ಮನೆಯವರು ಕಿರುಕುಳವೇ ಕಾರಣವೆಂದು ಬರೆದು, ಅವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಹೇಳಿದ್ಳು. ಸುಶ್ಮಿತಾಳ ಡೆತ್ ನೋಟ್ ಹಿನ್ನೆಲೆಯಲ್ಲಿ ತೀವ್ರ ತನಿಖೆ ನಡೆಸಿರುವ ಪೊಲೀಸ್ರು ಮೂವರನ್ನ ಬಂಧಿಸಿದ್ದಾರೆ.
ಸೂಸೈಡ್ ಪ್ರಕರಣ ಬೆಳಕಿಗೆ ಬರ್ತಿದ್ದಂತೆ ಆರೋಪಿಗಳು ತಪ್ಪಿಸಿಕೊಂಡಿದ್ರು. ಈ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೂವರು ಆರೋಪಿಗಳು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಅವಿತುಕೊಂಡಿದ್ರು. ಇಂದು ಈ ಮೂವರನ್ನ ಬಂಧಿಸಲಾಗಿದೆ.