ಅಂದು ಪ್ರೀತಿಸಿ ಮದ್ವೆಯಾದ ಇಂದು ಆಕೆ ಸಾವಿಗೆ ಕಾರಣನಾದ..!

508

ಕೃಷ್ಣರಾಜಪೇಟೆ: ಹಣ ತರುವಂತೆ ಪತ್ನಿಗೆ ಪೀಡಿಸ್ತಿದ್ದ ಗಂಡನಿಂದ ನೊಂದು ಪತ್ನಿ ನೇಣಿಗೆ ಶರಣನಾದ ಘಟನೆ ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ಪಟ್ಟಣದಲ್ಲಿ ನಡೆದಿದೆ. 19 ವರ್ಷದ ಅಂಜು ಆತ್ಮಹತ್ಯೆ ಮಾಡಿಕೊಂಡು ಗೃಹಣಿಯಾಗಿದ್ದಾಳೆ.

ಅಂಜು ಪತಿ ಆದಿತ್ಯ, ಹೆಂಡ್ತಿಗೆ ಹಣ ತರುಯೆಂದು ಪೀಡಿಸ್ತಿದ್ದನಂತೆ. ಇದೆ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಮಧ್ಯಾಹ್ನ ದಂಪತಿ ಜಗಳವಾಡಿದ್ದಾರೆ. ಆದ್ರೆ, ಇದೀಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮೃತದೇಹದ ಬಳಿ ಪತಿ ಆದಿತ್ಯ

ನಾಗಮಂಗಲ ಡಿವೈಎಸ್ ಪಿ ಕೆ.ಬಿ.ವಿಶ್ವನಾಥ, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ ಮತ್ತು ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಸಂಬಂಧ ಪತಿ ಆದಿತ್ಯನನ್ನ ಬಂಧಿಸಿ, ಅಂಜು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

ಕೃಷ್ಣರಾಜನಗರ ಮಿರ್ಲೆ ಗ್ರಾಮದ 17 ವರ್ಷದ ಅಂಜು ಹಾಗೂ ಕೆ.ಆರ್.ಪೇಟೆ ತಾಲೂಕಿನ ಕುಪ್ಪಳ್ಳಿ ಗ್ರಾಮದ 21 ವರ್ಷದ ಆದಿತ್ಯ ಫೇಸ್ ಬುಕ್ ಮೂಲಕ ಪರಿಚಯವಾಗಿದ್ರು. ಬಳಿಕ ಇಬ್ಬರ ನಡುವೆ ಪ್ರೀತಿಯಾಗಿ 2 ವರ್ಷಗಳ ಹಿಂದೆ ವಿವಾಹವಾಗಿದ್ರು. ಇವರ ದಾಂಪತ್ಯಕ್ಕೆ 14 ತಿಂಗಳ ಮಗು ಇದೆ. ತಂದೆಯ ಹಣದಾಹ, ತಾಯಿ ದುಡುಕಿನ ನಿರ್ಧಾರಕ್ಕೆ ಏನೂ ಅರಿಯದ ಮಗು ಅನಾಥವಾಗಿದೆ.




Leave a Reply

Your email address will not be published. Required fields are marked *

error: Content is protected !!