ಹುಬ್ಬಳ್ಳಿ: ಮಾರಕ ಕರೋನಾದಿಂದಾಗಿ ಎಲ್ಲೆಡೆ ಸ್ತಬ್ಧವಾಗಿದೆ. ಅವಶ್ಯಕ ವಸ್ತುಗಳ ಖರೀದಿಗೆ ಮಾತ್ರ ಒಂದಿಷ್ಟು ಷರತ್ತುಗಳೊಂದಿಗೆ ಒದಗಿಸಲಾಗ್ತಿದೆ. ಇದರ ನಡುವೆ ಎಣ್ಣೆ ಸಿಗದಿರುವುದಕ್ಕೆ ವ್ಯಕ್ತಿಯೊಬ್ಬ ಹುಬ್ಬಳ್ಳಿಯಲ್ಲಿ ಸೂಸೈಡ್ ಮಾಡಿಕೊಂಡಿದ್ದಾನೆ.
ಹೊಸೂರು ಗಣೇಶ ಪಾರ್ಕ್ ನಲ್ಲಿ 46 ವರ್ಷದ ಉಮೇಶ ಹಡಪದ ಎಂಬಾತ ಮದ್ಯ ಸಿಗದಿರುವುದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗರಾಜ ರಟಗಲ್ ಎಂಬುವರ ನಿರ್ಮಾಣ ಹಂತದ ಮನೆಯ ವಾಚ್ ಮನ್ ಆಗಿದ್ದ. ಕಳೆದ 15 ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದ. ಮೂರು ವರ್ಷದಿಂದ ಕುಟುಂಬದಿಂದ ದೂರ ಉಳಿದಿದ್ದ ಉಮೇಶ ಮದ್ಯ ಸಿಗದಕ್ಕೆ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.