ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಿರ್ದೇಶಕ ನಂದ ಕಿಶೋರ ಆ್ಯಕ್ಷನ್ ಕಟ್ ಹೇಳಿರುವ ನಟ ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದಲ್ಲಿನ ಕೆಲ ದೃಶ್ಯಗಳು ಇದೀಗ ವಿವಾದಕ್ಕೆ ಕಾರಣವಾಗಿದೆ. ಚಿತ್ರದಲ್ಲಿನ ಕೆಲ ದೃಶ್ಯಗಳಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡಲಾಗಿದೆ ಎಂದು ಪ್ರತಿಭಟನೆ ನಡೆಸಿದ್ದಾರೆ. ದೃಶ್ಯಗಳನ್ನ ತೆಗೆದು ಹಾಕುವುದಾಗಿ ನಿರ್ದೇಶಕರು ಹೇಳಿದ್ದಾರೆ.
ಇನ್ನು ಈ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದು, ಹಿಂದೂಗಳನ್ನ ಅವಹೇಳನ ಮಾಡುವುದು ಫ್ಯಾಶನ್ ಆಗಿದೆ. ಇದೆ ಧೈರ್ಯ ಬೇರೆ ಧರ್ಮಗಳ ವಿಚಾರದಲ್ಲಿ ಇದ್ಯಾ ಎಂದು ಕೇಳಿದ್ದಾರೆ. ಇದ್ರಿಂದ ಹಿಂದೂ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಸಹ ಕಲಾವಿದನ ತಲೆ ಮೇಲೆ ನಟ ಚಪ್ಪಲಿ ಕಾಲು ಇಟ್ಟಿರುವುದನ್ನ ಯಾಕೆ ಪ್ರಶ್ನೆ ಮಾಡುತ್ತಿಲ್ಲವೆಂದು ಕೇಳಿದ್ದಾರೆ.