ಕನ್ನಡ ಶಾಲೆ ದತ್ತು ಪಡೆದ ಡೈನಾಮಿಕ್ ಪ್ರಿನ್ಸ್

593

ಬೆಂಗಳೂರು: ಸ್ಯಾಂಡಲ್ ವುಡ್ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ ದೇವರಾಜ ಹುಟ್ಟು (ಜುಲೈ 4) ಹಬ್ಬವಿಂದು. ಅದ್ಧೂರಿ ಹುಟ್ಟು ಹಬ್ಬ ಆಚರಣೆಗೆ ಬ್ರೇಕ್ ಹಾಕಿರುವ ಅವರು, ಸಾಮಾಜಿಕ ಕಾರ್ಯಕ್ಕೆ ಕೈಹಾಕಿದ್ದಾರೆ. ಇದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಂದು ಸಂಸ್ಥೆಯ ಜೊತೆಗೂಡಿ ಕನ್ನಡ ಶಾಲೆಯೊಂದು ದತ್ತು ಪಡೆದಿದ್ದಾರೆ. ನನ್ನ ಹುಟ್ಟು ಹಬ್ಬಕ್ಕೆ ಹಾರ, ಕೇಕ್, ಪಟಾಕಿ ಅಂತಾ ಖರ್ಚು ಮಾಡುವ ಬದ್ಲು, ಶಾಲಾ ಮಕ್ಕಳಿಗೆ ನೋಟ್ ಬುಕ್ಸ್, ಪೆನ್, ಪೆನ್ಸಿಲ್ ನೀಡಿ ಅಂತಾ ಫ್ಯಾನ್ಸ್ ಗೆ ಟ್ವೀಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪ್ರಜ್ವಲ ದೇವರಾಜ ಈ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರ್ತಿವೆ.

ಚಂದನವನದಲ್ಲಿ ನಾಯಕ ನಟರೆಲ್ಲ ತಮ್ಮ ಜನ್ಮದಿನದಂದು ಸಾಮಾಜಿಕ ಕಾರ್ಯಕ್ಕೆ ಕೈಹಾಕ್ತಿರೊದು ನಿಜಕ್ಕೂ ಉತ್ತಮ ಕೆಲಸ. ಅಸಂಖ್ಯಾತ ಅಭಿಮಾನಿಗಳನ್ನ ಹೊಂದಿರುವ ನಟರ ಈ ನಿರ್ಧಾರ ಅನೇಕರಿಗೆ ಸ್ಪೂರ್ತಿಯಾಗಲಿ. ವ್ಯರ್ಥವಾಗಿ ಖರ್ಚು ಮಾಡುವ ಬದ್ಲು, ಒಂದೊಳ್ಳೆ ಕಾರ್ಯಕ್ಕೆ ಉಪಯೋಗಸಲಿ ಅನ್ನೋದು ಎಲ್ಲರ ಆಸೆ. ಹುಟ್ಟು ಹಬ್ಬದ ಶುಭಾಶಯಗಳು ಡೈನಾಮಿಕ್ ಪ್ರಿನ್ಸ್…




Leave a Reply

Your email address will not be published. Required fields are marked *

error: Content is protected !!