ಹತ್ಯೆಯಾದ ಸಿಧು ಕುಟುಂಬಸ್ಥರ ಭೇಟಿಯಾದ ರಾಹುಲ್ ಗಾಂಧಿ

160

ಪ್ರಜಾಸ್ತ್ರ ಸುದ್ದಿ

ಪಂಜಾಬ್: ಇತ್ತೀಚೆಗೆ ಹತ್ಯೆಯಾದ ಕಾಂಗ್ರೆಸ್ ನಾಯಕ, ಗಾಯಕ ಸಿಧು ಮೂಸ್ ವಾಲಾ ಕುಟುಂಬಸ್ಥರನ್ನು ಎಐಸಿಸಿ ಮಾಜಿ ಅಧ್ಯಕ್ಷ , ಸಂಸದ ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ. ಮಾನಸ ಜಿಲ್ಲೆಯ ಮೂಸ್ ಗ್ರಾಮಕ್ಕೆ ಭೇಟಿ ನೀಡಿದರು.

ಕುಟುಂಬಸ್ಥರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಅವರಿಗೆ ಸಾಂತ್ವಾನ ಹೇಳಿದರು. ಘಟನೆಯನ್ನು ಖಂಡಿಸಿರುವ ಅವರು, ಕೂಡಲೇ ಹಂತಕರನ್ನು ಬಂಧಿಸಬೇಕು ಎಂದಿದ್ದಾರೆ. ಈ ವೇಳೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರೇಂದ್ರ ಸಿಂಗ್, ಪಂಜಾಬ್ ವಿಧಾನಸಭೆ ವಿಪಕ್ಷ ನಾಯಕ ಪ್ರತಾಪ್ ರಾಜ್ ಬಾಜ್ವಾ, ಮಾಜಿ ಉಪ ಮುಖ್ಯಮಂತ್ರಿ ಒಪಿ ಸೊನಿ ಸೇರಿದಂತೆ ಹಲವು ನಾಯಕರಿದ್ದರು.

ಹಲವು ಗಣ್ಯರಿಗೆ ನೀಡಿದ್ದ ಭದ್ರತೆಯನ್ನು ಪಂಜಾಬ್ ಸರ್ಕಾರ ವಾಪಸ್ ಪಡೆದ ಮರುದಿನವೇ ಅಂದರೆ ಮೇ 29ರಂದು ಸಿಧು ಮೂಸ್ ವಾಲಾ ಹತ್ಯೆ ನಡೆದಿದೆ. ಗಾಯನದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದು ಸಿಧು ಮೂಸ್ ಕಳೆದ ವರ್ಷ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.




Leave a Reply

Your email address will not be published. Required fields are marked *

error: Content is protected !!