ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗ್ತಿದೆ. ಇದ್ರಿಂದಾಗಿ ಜಿಲ್ಲೆಯ ಜನರ ಮುಖದಲ್ಲಿ ಮಂದಹಾಸ ಮೂಡಿದೆ. ಇದರ ಜೊತೆಗೆ ರೈತರಿಗೂ ಸಂತಸವಾಗಿದ್ದು, ಬಿತ್ತನೆ ಕಾರ್ಯ ಭರದಿಂದ ಸಾಗಲಿದೆ.
ಇಂದು ಸಹ ಜಿಲ್ಲೆಯ ತುಂಬಾ ಮಳೆಯರಾಯ ತನ್ನ ದರ್ಶನ ತೋರಿಸಿದ್ದಾನೆ. ಹೀಗಾಗಿ ಸಿಂದಗಿ, ದೇವರಹಿಪ್ಪರಗಿ, ಬಸವನಬಾಗೇವಾಡಿ, ಇಂಡಿ ಪಟ್ಟಣ ಸೇರಿದಂತೆ ಬಹುತೇಕ ತಾಲೂಕಗಳಲ್ಲಿ ವರುಣನ ಆಗಮನವಾಗಿದೆ. ಎಲ್ಲಿ ನೋಡಿದ್ರೂ ಮೋಡ ಮುಸುಕಿದ ವಾತಾವರಣವಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಮಳೆಯಾಗಬೇಕಿದೆ.