ಪ್ರಜಾಸ್ತ್ರ ಸುದ್ದಿ
ನವದೆಹಲಿ: ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯುವ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ಸಂಬಂಧ, ಬಿಜೆಪಿ ವಕ್ತಾರ ಸುರೇಶ ನಕಹ್ವಾ ಟ್ವೀಟ್ ಮಾಡಿದ್ದಾರೆ. ಭೂಮಿ ಪೂಜೆ ದಿನ ಪ್ರಧಾನಿ ನರೇಂದ್ರ ಮೋದಿ, 22 ಕೆಜಿಯ ಬೆಳ್ಳೆಯಿಂದ ನಿರ್ಮಾಣ ಮಾಡಿದ ಇಟ್ಟಿಗೆ ಬಳಸಲಿದ್ದಾರೆ ಎಂದು ತಿಳಿಸಿದ್ದಾರೆ.
ಆಗಸ್ಟ್ 5ರಂದು ಬೆಳಗ್ಗೆ 11.30ಕ್ಕೆ ಭೂಮಿ ಪೂಜೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಆಯ್ದ ಪ್ರಮುಖ 200 ಜನ ಗಣ್ಯರು ಭಾಗವಹಿಸಲಿದ್ದಾರೆ. ಇದರಲ್ಲಿ ನಾಲ್ಕು ವಿಭಾಗ ಮಾಡಲಾಗಿದೆ. 50 ಜನ ಸಾಧು ಸಂತರು, 50 ಜನ ರಾಜಕಾರಣಿಗಳು, 50 ಜನ ರಾಮಮಂದಿರ ನಿರ್ಮಾಣದ ಪ್ರಮುಖರು ಹಾಗೂ ಉಳಿದವರಿಗೆ ಮತ್ತೊಂದು ವಿಭಾಗ.
ಹೀಗೆ ವ್ಯವಸ್ಥಿತವಾಗಿ ಅಂದು ನಡೆಯುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ 22 ಕೆಜಿ 600 ಗ್ರಾಂ ತೂಕದ ಇಟ್ಟಿಗೆಗಳಿಗೆ ಪೂಜೆ ಸಲ್ಲಿಸಿ ಮಂದಿರ ನಿರ್ಮಾಣದ ಕಾಮಗಾರಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.