ಭೂಸನೂರ ಹೇಳಿಕೆಗೆ ಅಶೋಕ ತಿರುಗೇಟು

440

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಎಂ.ಸಿ ಮನಗೂಳಿ ಅವರು ಕಂಡ ಕನಸುಗಳನ್ನ ಅವರು ನನಸು ಮಾಡಿ ಹೋಗಿದ್ದಾರೆ. ಮುಂದೆ ಯಾರೆ ಶಾಸಕರಾದರೂ ಅವರ ಕನಸುಗಳನ್ನ ನನಸು ಮಾಡಲಿ ಎಂದು ಅಶೋಕ ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ ಅವರಿಗೆ ತಿರುಗೇಟು ನೀಡಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತ್ನಾಡಿದ ಅವರು, ನಮ್ಮ ತಂದೆಯವರು ಕೊನೆಯ ಉಸಿರು ಇರುವ ತನಕ ತಾಲೂಕಿನ ಅಭಿವೃದ್ಧಿಗಾಗಿ ಹೋರಾಟ ಮಾಡಿದ್ದಾರೆ. 7 ಬಾರಿ ಚುನಾವಣೆಗೆ ನಿಂತು 2 ಬಾರಿ ಗೆದ್ದು ಬಂದರೂ ಅವರು ಕಂಡ ಕನಸುಗಳನ್ನ ನನಸು ಮಾಡಿ ಹೋಗಿದ್ದಾರೆ. ಅವರ ಕನಸುಗಳನ್ನ ನಾನು ನನಸು ಮಾಡುತ್ತೇನೆ ಎಂದು ಭೂಸನೂರ ಅವರು ಹೇಳಿದ್ದು ಅಚ್ಚರಿಯಾಗಿದೆ. 10 ವರ್ಷಗಳ ಅವರ ಅಧಿಕಾರದಲ್ಲಿ ಏನು ಮಾಡಿದ್ದಾರೆ ಅನ್ನೋದು ಅವಲೋಕನ ಮಾಡಿಕೊಳ್ಳಲಿ. ಮುಂದೆ ಯಾರೆ ಶಾಸಕರಾದರೂ ಅವರ ಕನಸುಗಳನ್ನ ನನಸು ಮಾಡಲಿ. ಮನಗೂಳಿ ಅವರ ಕನಸುಗಳನ್ನಲ್ಲ ಎಂದರು.

ಇನ್ನು ಕ್ಷೇತ್ರದಲ್ಲಿ ಕೇಳಿ ಬರ್ತಿರುವ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್ ತತ್ವ ಸಿದ್ಧಾಂತಗಳು ಒಂದೆಯಾಗಿವೆ. ಜಾತಿವಾದ ಬಿಜೆಪಿಯನ್ನ ಸೋಲಿಸುವ ಹಾಗೂ ತ್ರಿಕೋನ ಸ್ಪರ್ಧೆಯನ್ನ ತಪ್ಪಿಸುವ ದೃಷ್ಟಿಯಿಂದ, ಮುಖಂಡರು, ಕಾರ್ಯಕರ್ತರ ಜೊತೆ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಮಾರ್ಚ್ 9, ಮಂಗಳವಾರ ಸಂಜೆ ಸುಮಾರು 4 ಗಂಟೆಗೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನ ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದೇನೆ ಎಂದರು.

ಈ ವೇಳೆ ಮಹೇಶ ಮನಗೂಳಿ, ಮಂಜುನಾಥ ಬಿಜಾಪುರ, ಗುರಣ್ಣಗೌಡ ಬಿರಾದಾರ, ಇಕ್ಬಾಲ್ ತಲಕಾರಿ, ಸಿದ್ದಣ್ಣ ಚೌಧರಿ ಸೇರಿದಂತೆ ಹಲವರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!