ಶಿರಡಿ: ಸಾಯಿಬಾಬಾ ಅವರಿಗೆ ಅಸಂಖ್ಯಾತ ಭಕ್ತಗಣವಿದೆ. ದೇಶ ವಿದೇಶದಿಂದ ಅವರ ಜನ್ಮಸ್ಥಾನಕ್ಕೆ ಬಂದು ದರ್ಶನ ಪಡೆಯುತ್ತಾರೆ. ಇದೀಗ ಅವರ ಜನ್ಮಸ್ಥಾನದ ಕುರಿತಾಗಿಯೇ ವಿವಾದ ಎದ್ದಿದೆ. ಹೀಗಾಗಿ ಭಾನುವಾರದಿಂದ ಸಾಯಿಬಾಬಾ ದೇವಸ್ಥಾನ ಬಂದ್ ಮಾಡಲಾಗ್ತಿದೆ.
ಸಾಯಿಬಾಬ ಅವರು ಹಟ್ಟಿದ ಸ್ಥಳದ ಬಗ್ಗೆ ಸಿಎಂ ಉದ್ಧವ್ ಠಾಕ್ರೆ ನೀಡಿರುವ ಪರ್ಭಾನಿಯ ಪತ್ರದ ಹೇಳಿಕೆ ಸಾಕಷ್ಟು ವಿವಾದ ಹುಟ್ಟು ಹಾಕಿದೆ. ಇದ್ರಿಂದ ಆಕ್ರೋಶ ವ್ಯಕ್ತಪಡಿಸಿರುವ ಸಾಯಿಬಾಬಾ ಸಮಾಧಿ ಆಡಳಿತ ಮಂಡಳಿ ಸಿಎಂ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದೆ. ಹೀಗಾಗಿ ಜನವರಿ 19ರಿಂದ ಅನಿರ್ಧಿಷ್ಟಾವಧಿ ದೇವಸ್ಥಾನ ಬಂದ್ ಗೆ ಕರೆ ನೀಡಲಾಗಿದೆ.
ಸಿಎಂ ಠಾಕ್ರೆ ಅವರು ಪತ್ರಿ ಸಾಯಿಬಾಬಾ ಅವರ ಜನ್ಮಸ್ಥಳವಾಗಿದೆ. ಅದನ್ನ ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಅಂತಾ ಹೇಳಿರುವುದು ವಿವಾದದ ಕಿಡಿ ಹೊತ್ತಿಸಿದೆ.