ಸ್ವತಂತ್ರ ಹೋರಾಟಗಾರರಿಗೂ ಖರ್ಗೆಗೂ ಏನು ಸಂಬಂಧ: ಈಶ್ವರಪ್ಪ

173

ಪ್ರಜಾಸ್ತ್ರ ಸುದ್ದಿ

ಶಿವಮೊಗ್ಗ: ಬೆಳಗಾವಿಯ ಸುವರ್ಣಸೌಧದಲ್ಲಿನ ಸಾವರ್ಕರ್ ಫೋಟೋ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ಬಿಜೆಪಿ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಫೋಟೋ ಹಾಕೋವಾಗ ಬಾಯಿಗೆ ಮಣ್ಣು ಹಾಕಿಕೊಂಡಿದ್ದರೆ ಅಂತಾ ಪ್ರಶ್ನಿಸಿದರು.

ವೀರ ಸಾವರ್ಕರ್ ರಕ್ತ ಹಂಚಿಕೊಂಡ ನಾವು ಗೆಲ್ಲುತ್ತೇವೆಯೋ, ಮೊಹಮ್ಮದ್ ಅಲಿ ರಕ್ತ ಹಂಚಿಕೊಂಡ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಗೆಲ್ಲುತ್ತಾರೆಯೇ ನೋಡೋಣ. ಮತಕ್ಕಾಗಿ ನೆಹರುರವರು ಮುಸ್ಲಿಂರಿಗೆ ವಿಶೇಷ ಸ್ಥಾನಮಾನ ನೀಡಿದರು. ಅದೇ ರಕ್ತ ಸಿದ್ದರಾಮಯ್ಯರಲ್ಲಿ ಹರಿಯುತ್ತಿದೆ ಅಂತಾ ಕಿಡಿ ಕಾರಿದರು.

ಗೂಂಡಾ ಮತ್ತು ಕೊಲೆಗಡುಕರ ರಾಜ್ಯವಾಗಲು ಕಾಂಗ್ರೆಸ್ ಕಾರಣ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗಳು ಆಗುತ್ತಿವೆ. ಇದನ್ನು ತಡೆಯಲು ಕಾಂಗ್ರೆಸ್ಸಿಗೆ ಆಗುತ್ತಿಲ್ಲ. ಇದಕ್ಕೆ ಬಿಜೆಪಿ ಹೆದರುವುದಿಲ್ಲ ಅಂತಾ ಹೇಳಿದರು.




Leave a Reply

Your email address will not be published. Required fields are marked *

error: Content is protected !!