ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಉಡುಪಿ: ಕರೋನಾ ಸೋಂಕಿನಿಂದಾಗಿ ಹಿರಿಯ ಲೇಖಕಿ ಮುಮ್ತಾಜ್ ಬೇಗಂ(73) ಮಂಗಳವಾರ ನಿಧನರಾಗಿದ್ದಾರೆ. ಪುತ್ರಿಯ ಜೊತೆಗೆ ಗುಜರಾತ್ ನಲ್ಲಿ ವಾಸವಾಗಿದ್ದ ಅವರು, ತಮ್ಮ ಸೂರ್ಯಾಸ್ತ ಕೃತಿ ಬಿಡುಗಡೆಗಾಗಿ ಉಡುಪಿಯ ಬೆಳಪುಗೆ ಬಂದಿದ್ದರು.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಮಂಗಳವಾರ ನಿಧನರಾಗಿದ್ದಾರೆ. ಚಿಂಪಿ, ಅಂಕುರ, ಅವ್ಯಕ್ತ, ಬಂದಳಿಕೆ, ಪರದೇಶಿ, ವರ್ತುಲ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಅತ್ತಿಮಬ್ಬೆ ಪ್ರಶಸ್ತಿ, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಬಹುಮಾನ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಚೆನ್ನಶ್ರೀ ಸೇರಿ ಹಲವು ಗೌರವಗಳು ಸಂದಿವೆ.