ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಅಶ್ಲೀಲ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ದೂರನ್ನ ನೀಡಿದ್ದಾಳೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಮೇಶ ಜಾರಕಿಹೊಳಿ, ಮಹಾನಾಯಕನ ಕೊನೆಯ ಆಟ ಮುಗಿದಿದೆ. ನಾಳೆ ನಾನು ಆಟ ಶುರು ಮಾಡುತ್ತೇನೆ ಎಂದಿದ್ದಾರೆ.
ಇನ್ನು ಸರ್ಕಾರವನ್ನೇ ಬೀಳಿಸಿದ್ದೇನೆ. ಇದ್ಯಾವ ಲೆಕ್ಕ ಎಂದು ಹೇಳುವ ಮೂಲಕ, ನಾನು ಎಲ್ಲದಕ್ಕೂ ಸಿದ್ಧ ಅನ್ನೋ ರೀತಿಯ ಹೇಳಿಕೆ ನೀಡಿದ್ದಾರೆ. ಇಂಥಾ 10 ಸಿಡಿ ಬಂದರೂ ನಾನು ಹೆದರುವುದಿಲ್ಲ. ಯುವತಿಗೂ ಮೊದ್ಲು ನಾನು ಮೊದಲು ದೂರು ನೀಡಿದ್ದೇನೆ. ಪೊಲೀಸರು ಮೊದಲು ಅದರ ತನಿಖೆ ನಡೆಸಲಿ ಎಂದಿದ್ದಾರೆ.