ರಾಮನಗರ: ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಶಿವಕುಮಾರ ಶ್ರೀಗಳ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ಭೂಮಿ ಪೂಜೆ ನಡೆಸಿದ್ರು.
ಇದು ರಾಜ್ಯದ ಅತಿ ಎತ್ತರದ ಪ್ರತಿಮೆ ಇದಾಗಲಿದೆ. ಈ ವೇಳೆ ಡಿಸಿಎಂ ಅಶ್ವಥನಾರಾಯಣ, ಸಂಸದ ಡಿ.ಕೆ ಸುರೇಶ, ಬಸವರಾಜು, ಶಾಸಕ ಎ.ಮಂಜುನಾಥ ಹಾಗೂ ತುಮಕೂರಿನ ಮಠದ ಸಿದ್ದಲಿಂಗ ಸ್ವಾಮೀಜಿ ಉಪಸ್ಥಿತಿಯಿದ್ರು. ಇದೇ ವೇಳೆ ಮಾತ್ನಾಡಿದ ಸಂಸದ ಡಿ.ಕೆ ಸುರೇಶ, ತಮಕೂರಿನ ಬೆಟ್ಟದಲ್ಲಿ ಶ್ರೀಗಳು ಪ್ರತಿಮೆ ನಿರ್ಮಿಸಲಿ. ಈ ಬಗ್ಗೆ ಸರ್ಕಾರ ಪರಿಶೀಲನೆ ಮಾಡಬೇಕು ಎಂದು ಹೇಳಿದ್ರು.