ಬಿಸಿ ಊಟ ಯೋಜನೆ ಶಿವಕುಮಾರ ಶ್ರೀ ಹೆಸರು: ಸಿಎಂ ಬೊಮ್ಮಾಯಿ

178

ಪ್ರಜಾಸ್ತ್ರ ಸುದ್ದಿ

ತುಮಕೂರು: ಸರ್ಕಾರಿ ಶಾಲೆಗಳಲ್ಲಿ ನೀಡುವ ಮಧ್ಯಾಹ್ನ ಬಿಸಿ ಊಟದ ಯೋಜನೆಗೆ ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ ಹೆಸರಿನಲ್ಲಿ ‘ಅನ್ನದಾಸೋಹ’ ಎಂದು ಹೆಸರಿಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಶ್ರೀಗಳ 115ನೇ ಜಯಂತಿ ಕಾರ್ಯಕ್ರಮ ಮಠದ ಆವರಣದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಮಾತನಾಡಿದ ಸಿಎಂ, ಏಪ್ರಿಲ್ 1 ಶ್ರೀಗಳ ಜನ್ಮದಿನ. ಮಧ್ಯಾಹ್ನ ಬಿಸಿ ಊಟದ ಯೋಜನೆಗೆ ಅವರ ಹೆಸರು ಇಡಲಾಗುವುದು. ಈ ಬಗ್ಗೆ ಶೀಘ್ರದಲ್ಲಿ ಸರ್ಕಾರದ ಆದೇಶ ಹೊರಡಿಸಲಾಗುವುದು.

ತ್ರಿವಿಧ ದಾಸೋಹದ ಮೂಲಕ ಅಸಂಖ್ಯಾತ ಮಕ್ಕಳ ಬದುಕು ಕಟ್ಟಿಕೊಟ್ಟಿದ್ದಾರೆ. ಸುಮಾರು 88 ವರ್ಷಗಳ ಕಾಲ ಮಠದ ಸೇವೆ ಮಾಡಿದ್ದಾರೆ. ಶ್ರೀಗಳು ಹಚ್ಚಿದ ಒಲೆ ನಿರಂತರವಾಗಿ ಉರಿಯುತ್ತಿದೆ. ಅವರು ನಮ್ಮ ನಡುವೆ ಜೀವಂತವಾಗಿದ್ದಾರೆ ಎಂದರು.




Leave a Reply

Your email address will not be published. Required fields are marked *

error: Content is protected !!