ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದ ಸಾರಂಗಮಠ, ಗಚ್ಚಿನಮಠದ ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಅವರ 129ನೇ ಜಯಂತ್ಯುತ್ಸವ ನಿಮಿತ್ತ ನವೆಂಬರ್ 7ರಿಂದ 28ರ ತನಕ ಪ್ರತಿದಿನ ಸಂಜೆ 6.30ಕ್ಕೆ ‘ಶ್ರೀ ಸಿದ್ಧಾಂತ ಶಿಖಾಮಣಿ’ ಪ್ರವಚನ ನಡೆಯಲಿದೆ ಎಂದು ನಿವೃತ್ತ ಪ್ರಾಧ್ಯಾಪಕ ವಿ.ಡಿ ವಸ್ತ್ರದ ತಿಳಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 7ರ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ. ಕನ್ನೊಳ್ಳಿಯ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ಉದ್ಘಾಟನೆ ಮಾಡಲಿದ್ದಾರೆ. ಬಸವಪ್ರಭು ಸ್ವಾಮೀಜಿ, ಭೀಮಾಶಂಕರಮಠದ ಪೀಠಾಧಿಪತಿ ದತ್ತಪ್ಪಯ್ಯ ಸ್ವಾಮೀಜಿ, ಗುರುದೇವ ಆಶ್ರಮದ ಶಾಂತಗಂಗಾಧರ ಮಹಾಸ್ವಾಮೀಜಿ ಭಾಗವಹಿಸಲಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಬಿ.ಎನ್ ಪಾಟೀಲ(ಇಬ್ರಾಹಿಂಪುರ) ಪ್ರವಚನ ನಡೆಸಿಕೊಡಲಿದ್ದಾರೆ.
ಸದ್ವಿಚಾರ ಗೋಷ್ಠಿ, ಹಡಿಗೆ ಜಾತ್ರೆ, ಗುರುವಂದನ, ಅಡ್ಡಪಲ್ಲಕಿ ಮಹೋತ್ಸವ ಸೇರಿದಂತೆ ನಿತ್ಯ ಒಂದೊಂದು ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು. ಈ ವೇಳೆ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಅಶೋಕ ವಾರದ, ಸೋಮನಗೌಡ ಸೇರಿ ಇತರರು ಉಪಸ್ಥಿತರಿದ್ದರು.