ಶಿಕ್ಷಕಿಯ ಕ್ರೌರ್ಯಕ್ಕೆ ಕಣ್ಣು ಕಳೆದುಕೊಂಡ ವಿದ್ಯಾರ್ಥಿ!

358

ಹಾಸನ: ಶಾಲಾ ಶಿಕ್ಷಕಿಯೊಬ್ಬರು 5 ವರ್ಷದ ವಿದ್ಯಾರ್ಥಿ ಕಣ್ಣಿಗೆ ಹೊಡೆದ ಪರಿಣಾಮ ಕಣ್ಣು ಕಳೆದುಕೊಂಡ ಅಮಾನವೀಯ ಘಟನೆ ಹಾಸನದಲ್ಲಿ ನಡೆದಿದೆ. ನಗರದ ಎಲ್ ವಿಜಿಎಸ್ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದ್ದು, 5 ವರ್ಷದ ಮನೀಷ ಅನ್ನೋ ಬಾಲಕನ ಕಣ್ಣಿಗೆ ತೀವ್ರ ಹಾನಿಯಾಗಿದೆ.

ಆಗಸ್ಟ್ 13 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಬ್ಬಿಣದ ಸ್ಕೇಲ್ ನಿಂದ ವಿದ್ಯಾರ್ಥಿಗೆ ಹೊಡೆದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಡಾಕ್ಟರ್ ಹೇಳುವ ಪ್ರಕಾರ ಒಂದು ಕಣ್ಣಿಗೆ ತುಂಬಾ ಹಾನಿಯಾಗಿದ್ದು ದೃಷ್ಟಿ ಬರುವುದು ಕಡಿಮೆ ಅಂತಾ ಹೇಳಿದ್ದಾರಂತೆ. ಇದ್ರಿಂದ ಕಂಗಾಲದ ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದ್ದಾರೆ.

ವಿದ್ಯಾರ್ಥಿ ತಾಯಿ ರಾಣಿ ಕೊಟ್ಟಿರುವ ದೂರಿನ ಹಿನ್ನೆಲೆಯಲ್ಲಿ ಹಲ್ಲೆ ಮಾಡಿರುವ ಶಿಕ್ಷಕಿ ಗಿರಿಜಾ, ದಿವ್ಯಾ, ಶಿವೇಗೌಡ, ವೆಂಕಟೇಗೌಡ ಸೇರಿ ನಾಲ್ವರ ಮೇಲೆ ಕೇಸ್ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!