ಜಮ್ಮು ಕಾಶ್ಮೀರ: 71ನೇ ಗಣರಾಜ್ಯೋತ್ಸವದ ಸಂಭ್ರಮದ ಹೊತ್ತಿನಲ್ಲಿಯೇ ಕಣಿವೆ ನಾಡಿನಲ್ಲಿ ಮೂವರು ಉಗ್ರರನ್ನ ಭಾರತೀಯ ಸೇನಾ ಪಡೆ ಹೊಡೆದುರುಳಿಸಿದೆ. ಅವಂತಿಪುರದಲ್ಲಿ ಜೈಷ್ಇಮೊಹ್ಮದ್ ಉಗ್ರ ಸಂಘಟನೆ ಮೂವರನ್ನ ಮಟ್ಟ ಹಾಕಲಾಗಿದೆ.
ಜೈಷ್ಇಮೊಹ್ಮದ್ ಸಂಘಟನೆಯ ಕಮಾಂಡರ್ ಹಾಗೂ ಇಬ್ಬರು ಅಡಗಿ ಕುಳ್ತಿರುವ ಮಾಹಿತಿ ಪಡೆದ ಸೇನೆ, ಕಾರ್ಯಾಚರಣೆಗೆ ಮುಂದಾಗಿದೆ. ಈ ವೇಳೆ ಯೋಧರ ಮೇಲೆ ದಾಳಿ ನಡೆಸಲಾಗಿದೆ. ಆಗ ಕಾರ್ಯಾಚರಣೆಯನ್ನ ಎನ್ ಕೌಂಟರ್ ಗೆ ಬದಲು ಮಾಡಿ ಮೂವರನ್ನ ಉಡೀಸ್ ಮಾಡಲಾಗಿದೆ. ಈ ವೇಳೆ ಮೂವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜೆಇಎಂ ಕಮಾಂಡರ್ ಖ್ವಾರಿ ಯಾಸಿರ್, ಮೂಸಾ ಅಬು ಉಸ್ಮಾನ್ ಹಾಗೂ ಬುರ್ಹಾನ್ ಶೇಖ್ ಅನ್ನೋ ಮೂವರು ಉ್ರಗರನ್ನ ಹತ್ಯೆ ಮಾಡಲಾಗಿದೆ.