ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಅನ್ ಲಾಕ್ 2.0 ಶುರುವಾಗಿದೆ. ಜೂನ್ 21ರಿಂದ ರಾಜ್ಯದ 16 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಉಳಿದ 13 ಜಿಲ್ಲೆಗಳಲ್ಲಿ ಅರ್ಧ ಅನ್ ಲಾಕ್ ಮುಂದುವರೆಸಲಾಗಿದೆ.
ಶೇಕಡ 5ಕ್ಕಿಂತ ಕಡಿಮೆ ಸೋಂಕು ಇರುವ ಬೆಂಗಳೂರು, ತುಮಕೂರು, ಕೋಲಾರ, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ, ಕೊಪ್ಪಳ, ಬೆಳಗಾವಿ, ದಕ್ಷಿಣ ಕನ್ನಡ, ಮಂಡ್ಯ, ರಾಯಚೂರು, ಗದಗ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಲ್ಲಿ ಸಂಪೂರ್ಣ ಅನ್ ಲಾಕ್ ಘೋಷಣೆ ಮಾಡಲಾಗಿದೆ.
ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಕೊಡಗು, ದಾವಣಗೆರೆ, ಧಾರವಾಡ, ಬಳ್ಳಾರಿ, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಲ್ಲಿ ಯಥಾಸ್ಥಿತಿ ಕಾಪಾಡಿಕೊಂಡು ಹೋಗಲು ಸೂಚಿಸಲಾಗಿದೆ.
ಇನ್ನು ಎಲ್ಲ ಅಂಗಡಿಗಳು ಸಂಜೆ 5 ಗಂಟೆಯ ತನಕ ತೆರೆಯಬಹುದಾಗಿದೆ. ಜಿಮ್, ರೆಸಾರ್ಟ್, ಹೋಟೆಲ್, ಬಸ್ ಸಂಚಾರಕ್ಕೆ, ಔಟ್ ಡೋರ್ ಶೂಟಿಂಗ್ ಮಾಡಬಹುದು. ಆದ್ರೆ, ಇದೆಲ್ಲದಕ್ಕೂ ಶೇಕಡ 50ರಷ್ಟು ಅವಕಾಶ. ಸಭೆ, ಸಮಾರಂಭಗಳು, ರಾಜಕೀಯ ಕಾರ್ಯಕ್ರಮಗಳು, ಧಾರ್ಮಿಕ ಚಟುವಟಿಕೆಗಳಿಗೆ ನಿರ್ಬಂಧವಿದೆ. ಮಾಲ್, ಸಿನಿಮಾ ಥಿಯೇಟರ್ ಬಂದ್ ಇರುತ್ತವೆ. ಇದರ ಜೊತೆಗೆ ವೀಕೆಂಡ್ ಕರ್ಫ್ಯೂ ಮುಂದುವರೆಯುತ್ತೆ.
ಈ ಎಲ್ಲ ಸಡಿಲಿಕೆ ಜುಲೈ 5ರ ತನಕ ಇರುತ್ತೆ. ಇಷ್ಟೆಲ್ಲ ಸಡಿಲಿಕೆ 16 ಜಿಲ್ಲೆಗಳಿಗೆ ಮಾತ್ರ. ಉಳಿದ 13 ಜಿಲ್ಲೆಗಳಿಗೆ ಇದು ಅನ್ವಯವಾಗುವುದಿಲ್ಲ. 13 ಜಿಲ್ಲೆಗಳಲ್ಲಿ ಹಿಂದಿನ ನಿಯಮಗಳು ಅನ್ವಯವಾಗುತ್ತೆ ಎಂದು ಸಿಎಂ ಹೇಳಿದ್ದಾರೆ.