ಚಿಟಗುಪ್ಪ: ಕಳೆದ 21 ವರ್ಷಗಳಿಂದ ಚಿತ್ರದುರ್ಗ ನರಗದ ಮುರುಘಾಮಠದಿಂದ ನಡೆದುಕೊಂಡು ಬರ್ತಿರುವ ವಚನ ಕಮ್ಮಟ ಪರೀಕ್ಷೆಗಳನ್ನ, ಈ ವರ್ಷವು ನಡೆಸಲಾಗ್ತಿದೆ. ವಚನ ಕಮ್ಮಟ ಪರೀಕ್ಷೆಗಳು ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳವರೆಗೆ ನಡೆಸಲಾಗುತ್ತಿದೆ. ಹೀಗಾಗಿ ಆಸಕ್ತರು ಇದರಲ್ಲಿ ಭಾಗವಹಿಸಬಹುದು.
ಪರೀಕ್ಷೆಯ ವಿವರ :
ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 40 ರೂಪಾಯಿ, ಪದವಿ ಪೂರ್ವ, ಪದವಿ ವಿದ್ಯಾರ್ಥಿಗಳಿಗೆ 50 ರೂಪಾಯಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 75 ರೂಪಾಯಿಗಳ ಶುಲ್ಕ ನಿಗದಿ ಪಡಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಭಾಗವಹಿಸಬಹುದು. ಸೆಪ್ಟಂಬರ್ 15 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿದೆ.
ಬೀದರ್ ಜಿಲ್ಲೆಯಿಂದ ಭಾಗವಹಿಸಲು ಆಸಕ್ತಿ ಇರುವವರು ಹೆಚ್ಚಿನ ಮಾಹಿತಿಗಾಗಿ ಚಿಟಗುಪ್ಪಾ ತಾಲೂಕಿನ ಸಂಚಾಲಕರಾಗಿರುವ ಸಂಗಮೇಶ ಎನ್ ಜವಾದಿ ಅವರನ್ನ ಸಂಪರ್ಕಿಸಬಹುದು 9663809340.