ವಿಜಯಪುರ: ಗುಮ್ಮಟನಗಿರಿಯಲ್ಲಿ ಮೊದಲು ದಾಖಲಾಗಿದ್ದ ಕರೋನಾ ಸೋಂಕಿತ ವೃದ್ಧೆ ಗುಣಮುಖರಾಗಿದ್ದಾರೆ. ನಗರದ ಜಿಲ್ಲಾಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲಾಡಳಿತದಿಂದ ಸಸಿ ನೀಡುವ ಮೂಲಕ ಬೀಳ್ಕೊಡಲಾಗಿದೆ.
ವಿಜಯಪುರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ P221 ವೃದ್ಧೆ ಇವರು. ಮಹಾರಾಷ್ಟ್ರದಲ್ಲಿ ಸಂಬಂಧಿಯೊಬ್ಬರ ಅಂತ್ಯಸಂಸ್ಕಾರ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಕರೋನಾ ಕೇಸ್ ಪತ್ತೆಯಾಗಿತ್ತು. ಸಧ್ಯ P221 ಗುಣಮುಖವದಿಂದ ಜಿಲ್ಲೆಯ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. 39 ಕರೋನಾ ಕೇಸ್ ನಲ್ಲಿ ಒರ್ವ ವೃದ್ಧೆ ಗುಣಮುಖ. 38 ಕೇಸ್ ನಲ್ಲಿ ಇಬ್ಬರು ಸಾವು. ಒಟ್ಟು 36 ಕರೋನಾ ಸೋಂಕಿತರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.